Updated News From Kaup

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಿಗೆ ಸನ್ಮಾನ

Posted On: 09-12-2021 09:40AM

ಮುಂಬಯಿ : ಮುಂಬಯಿ ಮಹಾನಗರ ಹಾಗೂ ಉಪನಗರಗಳ ಲ್ಲಿನ ಕರಾವಳಿ ಜಿಲ್ಲೆಗಳ ತುಳು ಕನ್ನಡಿಗರ ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪ್ರಮುಖರು ಅಧಿಕ ಸಂಖ್ಯೆಯಲ್ಲಿ ಸೇರಿದ್ದು ಇವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ 4 ಗಣ್ಯರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಈ ರೀತಿ ನಾವೆಲ್ಲರೂ ಒಂದಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂಲಕ ಹಿಂದಿನಂತೆ ಮುಂದೆಯೂ ಕರಾವಳಿಯ ನಮ್ಮ ಜಿಲ್ಲೆಗಳ ಅಭಿವೃದ್ದಿಗಾಗಿ ಮತ್ತಷ್ಟು ಕ್ರೀಯಾಶೀಲರಾಗೋಣ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನಿರ್ಗಮನ ಅಧ್ಯಕ್ಷರೂ, ಸಮಿತಿಯ ಸಂಸ್ಥಾಪಕರೂ ಆದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಅಭಿಪ್ರಾಯ ಪಟ್ಟರು. ನ. 5 ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಸಭಾಗೃಹದಲ್ಲಿ ನಡೆದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಸನ್ಮಾನ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಳಿಕ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಮುಂಬಯಿಯ ಖ್ಯಾತ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ, ಸಮಾಜ ಸೇವಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಸುರೇಶ್ ರಾವ್ ಮತ್ತು ಜನಪ್ರಿಯ ಪತ್ರಕರ್ತ ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಯವರನ್ನು ಸನ್ಮಾನಿಸಿ ಮಾತನಾಡುತ್ತಾ ಸಮಿತಿಯ ಕಾರ್ಯದ ಬಗ್ಗೆ ಸಂಕ್ತಿಪ್ತವಾಗಿ ಮಾತನಾಡುತ್ತಾ ಸಮಿತಿಯ ಮಾರ್ಗದರ್ಶಕರಾಗಿದ್ದ ದಿ. ಜೋರ್ಜ ಫೆರ್ನಾಂಡಿಸ್ ಹಾಗೂ ಅಗಲಿನ ಇನ್ನಿತರ ಗಣ್ಯರ ಸಹಕಾರ ಹಾಗೂ ಪ್ರೋತ್ಸಾಹವನ್ನು ನೆನಪಿಸಿಕೊಂಡರು. ಈ ಸಲ ಪದ್ಮ ವಿಭೂಷಣ ಪ್ರಶಸ್ತಿ ಪಡೆದ ಡಾ. ಬಿ. ಎಂ. ಹೆಗ್ದೆ ಇಂದು ಈ ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಮುಂದೆ ಅವರನ್ನು ಸನ್ಮಾನಿಸಲಿರುವೆವು. ಎಲ್ಲಾ ಸಮುದಾಯದವರು ಒಂದು ಕೊಡೆಯಡಿಯಲ್ಲಿದ್ದಂತೆ ನೂತನ ಅಧ್ಯಕ್ಷರಾದ ಎಲ್. ವಿ. ಅಮೀನ್ ಹಾಗೂ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯು ಮುಂದೆಯೂ ಸರಿಯಾದ ಹಾದಿಯಲ್ಲಿ ಮುನ್ನಡೆಯುದರೊಂದಿಗೆ ಜಿಲ್ಲೆಗಳ ಅಭಿವೃದ್ದಿ ಕಾರ್ಯವು ಭರದಿಂದ ಸಾಗಲಿದೆ ಎಂದರು.

ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾಗಿ ಮಲ್ಪೆ ಎಮ್ ಮಹೇಶ್ ಕುಮಾರ್ ಆಯ್ಕೆ

Posted On: 09-12-2021 09:20AM

ಉಡುಪಿ : ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ (ರಿ.) ಬೆಂಗಳೂರು ಇದರ ನೇತೃತ್ವ ದಲ್ಲಿ ರಾಜ್ಯ ದ 31 ಜಿಲ್ಲೆಗಳ ಎಲ್ಲಾ ಮುದ್ರಣ ಮಾಲಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆ ಆಗಿದ್ದು ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಂಘದ ಅಧ್ಯಕ್ಷರು ಅಶೋಕ್ ಕುಮಾರ್ ಮತ್ತು ಮಾಜಿ ರಾಷ್ಟ್ರಧ್ಯಕ್ಷರು ಪ್ರಸ್ತುತ ಪ್ರಿಂಟ್ ಕ್ಲಸ್ಟರ್ ನ ಅಧ್ಯಕ್ಷರು ಆದ ಸಿ ಆರ್ ಜನಾರ್ಧನ್ ಹಾಗೂ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಅಧಿಕೃತವಾಗಿ ನೇಮಕ ಮಾಡಿದರು.

ಮಹಿಳೆಯರಿಗಾಗಿ ಉಚಿತ ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ತರಬೇತಿ

Posted On: 08-12-2021 10:31AM

ಉಡುಪಿ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಣಿಪಾಲ- ಕೆನರಾ ಬ್ಯಾಂಕ್ ಆರ್ ಸೆಟಿ (ಸಿಂಡ್ಆರ್ ಸೆಟಿ) ಇವರ ವತಿಯಿಂದ ಉಚಿತ ಸ್ವ ಉದ್ಯೋಗ ತರಬೇತಿ ಡಿಸೆಂಬರ್‌ 27 ರಿಂದ ಜನವರಿ 25 ರವರೆಗೆ ಒಟ್ಟು 30 ದಿನಗಳ ಬ್ಯೂಟಿಪಾರ್ಲರ್ ತರಬೇತಿ ಹಾಗೂ ಡಿಸೆಂಬರ್ 30 ರಿಂದ ಜನವರಿ 28 ರವರೆಗೆ ಮಹಿಳೆಯರ ಟೈಲರಿಂಗ್ ತರಬೇತಿಯು ಪ್ರಾರಂಭವಾಗಲಿದೆ.

'ಸಟ್ಟಿ : ಸಂತಾನ ಸಂತೇಸಿಗ 'ನಾಗ - ಸುಬ್ರಾಯ ದೇವೆರೆ' ಸುಗಿಪು

Posted On: 07-12-2021 05:52PM

ಕರಾವಳಿಯ ಆರಾಧನಾ ಮಾರ್ಗದಲ್ಲಿ ಕಂಡು ಬರುವ ರೋಚಕ ಅಷ್ಟೇ ಸಹಜ ಅನುಸಂಧಾನವೇ ನಾಗ-ಸುಬ್ರಹ್ಮಣ್ಯ ಅಭೇದ ಕಲ್ಪನೆ. ಮೂಲದ ನಾಗ ಶ್ರದ್ಧೆಯು ಹರಿದು ಬಂದ (ಕರೆನಾಡಿಗೆ) ಶಿಷ್ಟದ ಸುಬ್ರಹ್ಮಣ್ಯ ಚಿಂತನೆಯೊಂದಿಗೆ ಸಂಲಗ್ನಗೊಂಡ ವಿಧಾನ ಆಶ್ಚರ್ಯವನ್ನು ಉಂಟು ಮಾಡಿ ಯೋಚಿಸುವಂತೆ ಪ್ರೇರಿಸುತ್ತದೆ. ’ಸುಬ್ರಾಯ ದೇವೆರ್ ಅಜಿಪಕಾರ ಗದ್ದಿಗೆಡ್, ಮೂಜಿಕಾರ ಮುಂಡು ಮುಕ್ಕಾಳಿಗೆಡ್, ಮೊರಂಪಾಯಿ ಮಲ್ಲಿಗೆಡ್, ಕೇದಾಯಿ ಸಂಪಿಗೆಡ್, ಸರ್ಪಲಿಂಗೊಡು, ಮೈರ ಬಾಣೊಡು, ಒಡ್ಡುಪಾಡಿ ಒಲೆಗ ಆವೊಂದೆರ್

'ತುಳುನಾಡಿನ ಪ್ರಾಣಿ ಜಾನಪದ' ಗ್ರಂಥ ಲೋಕಾರ್ಪಣೆ

Posted On: 07-12-2021 02:26PM

ಪಡುಬಿದ್ರಿ : ಇಲ್ಲಿನ ಸಿರಿ ಕಮಲ ಪ್ರಕಾಶನ ಸಂಸ್ಥೆಯು ಪ್ರಕಟಿಸಿರುವ ಡಾ.ಅಶೋಕ ಆಳ್ವ ಅವರ ಸಂಶೋಧನ ಗ್ರಂಥ 'ತುಳುನಾಡಿನ ಪ್ರಾಣಿ ಜಾನಪದ' ಡಿಸೆಂಬರ್ 11 ರಂದು ಸಂಜೆ 5 ರಿಂದ ಪಡುಬಿದ್ರಿಯ ಬಂಟರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕಳತ್ತೂರು : ಮಹಾಚೌತಿ ಪ್ರಯುಕ್ತ 111 ತೆಂಗಿನಕಾಯಿಗಳ ಗಣಯಾಗ

Posted On: 06-12-2021 06:30PM

ಕಾಪು : ಕಳತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 7, ಮಂಗಳವಾರದಂದು ಮಹಾಚೌತಿ ಪ್ರಯುಕ್ತ 111 ತೆಂಗಿನಕಾಯಿಗಳ ಗಣಯಾಗ ನೆರವೇರಲಿದ್ದು, 11 ಗಂಟೆಗೆ ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆಯೂ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 06-12-2021 06:19PM

ಉಡುಪಿ : ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ನ ದ್ವೈವಾರ್ಷಿಕ ಚುನಾವಣೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ರೀತಿಯಲ್ಲಿ ಕಾರ್ಯನಿರ್ವಸುವಂತೆ ಎಲ್ಲಾ ಮೈಕ್ರೋ ಅಬ್ಸರ್ವರ್ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ವಿಧಾನಪರಿಷತ್ ಚುನಾವಣಾ ಕರ್ತವಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್ಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿ : ಮಹಾ ಪರಿನಿರ್ವಾಣ ದಿನ

Posted On: 06-12-2021 06:12PM

ಉಡುಪಿ : ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ, ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪಡು ಕುತ್ಯಾರು : ಶ್ರೀ ದುರ್ಗಾಮಂದಿರದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ ಸಂಪನ್ನ

Posted On: 06-12-2021 05:16PM

ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡು ಕುತ್ಯಾರು ಗ್ರಾಮದ ಶ್ರೀ ದುರ್ಗಾಮಂದಿರದಲ್ಲಿ ಡಿಸೆಂಬರ್ 05ರಂದು ವಾರ್ಷಿಕ ಭಜನಾ ಮಂಗಲೋತ್ಸವವು ಸಂಪನ್ನಗೊಂಡಿತು.

ಸೃಜನಶೀಲತೆ, ಏಕಾಗ್ರತೆಯನ್ನು ಉದ್ದೀಪನಗೊಳ್ಳಲು, ಹಾಗೂ ಬದುಕನ್ನು ಅರಿತು ಜೀವನೋತ್ಸಾಹ ಬೆಳೆಸಲು ಚಿತ್ರಕಲೆ ಸಹಕಾರಿ : ಡಾ। ಯು.ಸಿ.ನಿರಂಜನ್

Posted On: 05-12-2021 11:35PM

ಮಣಿಪಾಲ : ಪ್ರಷಾ ಸೇವಾ ಟ್ರಸ್ಟ್ ಹಾಗೂ ತ್ರಿವರ್ಣ ಕಲಾಕೇಂದ್ರದ ಸಹಯೋಗದಲ್ಲಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ದಿವಂಗತ ಡಿ. ವಿ. ಶೆಟ್ಟಿಗಾರ್ ಸ್ಮರಣಾರ್ಥ 18 ವರ್ಷ ಮೇಲ್ಪಟ್ಟ ಕಲಾಸಕ್ತರಿಗಾಗಿ ಡಿಸೆಂಬರ್ 5ರಂದು ಪ್ರಶಾವರ್ಣ - 2021 ಉಚಿತ ಒಂದು ದಿನದ ಚಿತ್ರಕಲಾ ಕಾರ್ಯಾಗಾರ ಜರಗಿತು.