ವೀಕೆಂಡ್ ಕಫ್ಯೂ೯: ಬಂಟಕಲ್ಲು ಅಯ್ಯಪ್ಪ ಶಿಬಿರದಲ್ಲಿ ಜರಗಲಿದ್ದ ಮಹಾಪೂಜೆ, ಅನ್ನಸಂತರ್ಪಣೆ, ಶನಿಕಥಾ ಪಾರಾಯಣವು ಸೋಮವಾರಕ್ಕೆ ಮುಂದೂಡಿಕೆ
ಕಾಪು : ಸಾರ್ವಜನಿಕ ಗಣೇಶೋತ್ಸವ ವೇದಿಕೆ, ಬಂಟಕಲ್ಲು ಇಲ್ಲಿನ ಅಯ್ಯಪ್ಪ ಶಿಬಿರದಲ್ಲಿ ಜನವರಿ 6 ಮತ್ತು 7ರಂದು ನಡೆಯುವ ಕಾರ್ಯಕ್ರಮಗಳು ಎಂದಿನಂತೆ ಜರಗಿದೆ.
ಶನಿವಾರ ಮತ್ತು ಭಾನುವಾರ ವೀಕೆಂಡ್ ಕಫ್ಯೂ೯ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ,
ಶನಿವಾರದ ಜರಗಲಿದ್ದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅನ್ನಸಂತರ್ಪಣೆ ಮತ್ತು ಶನಿಕಥಾ ಪಾರಾಯಣವು ಜನವರಿ 10, ಸೋಮವಾರ ಮಧ್ಯಾಹ್ನ ನಡೆಯಲಿದೆ. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ, ಅಯ್ಯಪ್ಪ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
