ಕಾಪು : ಕೊರೊನ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಕರಿಗೆ ಸರ್ಜಿಕಲ್ ಫೇಸ್ ಮಾಸ್ಕ್ ನೀಡುವ ಮೂಲಕ ಯುವಕರನ್ನು ಹುರಿದುಂಬಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ. ಗೀತಾಂಜಲಿ ಸುವರ್ಣ ಮತ್ತು ಗುರೂಜಿ ಸಾಯಿ ಈಶ್ವರ್ ಇವರು ಕಳೆದ 17 ದಿನಗಳಿಂದ ಕಟಪಾಡಿ ಸುತ್ತಮುತ್ತಲಿನ ಪ್ರದೇಶಗಳಿಗೆ ಆಹಾರ ತಯಾರಿಸಿ ಸಿಲ್ವರ್ ಕಂಟೈನರ್ ನಲ್ಲಿ ಪಾರ್ಸೆಲ್ ಮಾಡಿ ಹಸಿದವರಿಗೆ, ಊಟ ತಯಾರಿಸಲಾಗದೆ ಇರುವವರಿಗೆ, ರಸ್ತೆ ಬದಿ ತಿರುಗಾಡುವವರಿಗೆ, ಆಹಾರವನ್ನು ತಯಾರಿಸಿ ಕಳುಹಿಸಿಕೊಡುತ್ತಿದ್ದಾರೆ. 18 ನೇ ದಿನವಾದ ಇಂದು ಚಿತ್ರಾನ್ನ ತಯಾರಿಸಿದರು. ಸಾಯಿ ಸಾಂತ್ವನ ಮಂದಿರ ಶಂಕರಪುರ, ಗುಡ್ಡೆಯಂಗಡಿ ಫ್ರೆಂಡ್ಸ್ ಮತ್ತು ಸುಭಾಸ್ನಗರದ ಯುವಕರ ತಂಡವೊಂದು ಇವರಿಗೆ ಸಾಥ್ ನೀಡುತ್ತಿದೆ.