ಕಾಪು : ಶಿರ್ವ ಪಿಲಾರುವಿನಲ್ಲಿ ಅತ್ತೆ ಮನೆಯಲ್ಲಿ ವಾಸವಾಗಿದ್ದ ಲವೀನಾ ಎಂಟು ವರೆ ತಿಂಗಳ ಗರ್ಭಿಣಿ ಇವರು ತನ್ನ ತವರು ಮನೆಗೆ ಹೋಗಬೇಕೆಂದು ಬಹಳ ದಿನದಿಂದ ಚಡಪಡಿಸುತ್ತಿದ್ದರು. ಲವೀನಾ ಅವರ ಶಿರ್ವದ ಮನೆಗೆ ಹೋಗುವ ದಾರಿಯು ಕೂಡ ಸರಿಯಾಗಿ ವ್ಯವಸ್ಥಿತವಾಗಿ ಇರಲಿಲ್ಲ ಆದ್ದರಿಂದ ವೈದ್ಯರು ಕೂಡ ಮನೆಗೆ ಬರುವಂತೆ ಇರಲಿಲ್ಲ ಮತ್ತು ಹತ್ತಿರದಲ್ಲಿ ಯಾವುದೇ ರೀತಿಯ ಆಸ್ಪತ್ರೆಯ ಸೌಲಭ್ಯ ಇರಲಿಲ್ಲ. ಪತಿ ಕೂಡ ಸೌದಿ ಅರೇಬಿಯಾದಲ್ಲಿ ಇರುವುದರಿಂದ ಈಕೆಗೆ ತವರು ಮನೆಗೆ ಹೋಗಲು ಅನಾನುಕೂಲವಾಗಿತ್ತು. ಈ ಬಗ್ಗೆ ಲವೀನಾ ಇವರು ಶಿರ್ವ ಪೊಲೀಸ್ ಸ್ಟೇಷನ್ ಠಾಣಾಧಿಕಾರಿಗಳಲ್ಲಿ ವಿಷಯವನ್ನು ತಿಳಿಸಿದಾಗ, ಠಾಣಾಧಿಕಾರಿಗಳು ಮುತುವರ್ಜಿಯನ್ನು ವಹಿಸಿ ಈ ವಿಷಯವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಇವರಿಗೆ ತಿಳಿಸಿದರು, ಗೀತಾಂಜಲಿ ಸುವರ್ಣ ಇವರು ತಕ್ಷಣ ADC ಅವರಿಂದ ಅನುಮತಿ ಪಡೆದುಕೊಂಡು, ಲವೀನಾ ಅವರನ್ನು ತಪಾಸಣೆಗೆ ಒಳಪಡಿಸಿ ಆಂಬುಲೆನ್ಸ್ ನ ವ್ಯವಸ್ಥೆಯನ್ನು ಮಾಡಿ ಸುರಕ್ಷಿತವಾಗಿ ಲವೀನಾರನ್ನು ಕಾರವಾರದಲ್ಲಿರುವ ತವರು ಮನೆಗೆ ಕಳುಹಿಸುವ ಕಾರ್ಯವನ್ನು ಮಾಡಿರುತ್ತಾರೆ.