ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ, ಎ. 12 : ಹಿರಿಯ ನಾಗರಿಕರಿಗೆ ವೀಳ್ಯದೆಲೆ ಭಾಗ್ಯ

Posted On: 14-04-2020 10:00PM

ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ಎಷ್ಟೋ ಮಂದಿ ಜನರು ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ.. ಇದರ ನಡುವೆ ವಿಶೇಷ ರೀತಿಯಲ್ಲಿ ಜನರ ಗಮನ ಸೆಳೆದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಧೀರ್ ಶೆಟ್ಟಿ ಮಂಡೇಡಿ. ಇವರು ಸತತ ಲಾಕ್ ಡೌನ್ ಆರಂಭವಾದ ದಿನಗಳಿಂದ ಊರಿನ ಎಲ್ಲಾ ಹಿರಿಯ ನಾಗರಿಕರಿಗೆ ವೀಳ್ಯದೆಲೆಯನ್ನು ಕೊಟ್ಟು ತಮ್ಮ ಅಳಿಲು ಸೇವೆ ಮಾಡಿ ಹಿರಿಯ ನಾಗರೀಕರ ಮನಸ್ಸು ಮತ್ತು ಊರಿನವರ ಮನ ಗೆದ್ದಿದ್ದಾರೆ. ಇವರು ಶಂಕರಪುರ ಇನ್ನಂಜೆಯ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರು ಆಗಿದ್ದು ಎಲ್ಲರಿಗೂ ತಿಳಿಯದಂತೆ ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ..