ದೇವರು ಉಂಡ ಊರು ಎಂದೇ ಪ್ರಸಿದ್ಧಿಯಲ್ಲಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊರೊನ ಮಹಾಮಾರಿಯಿಂದ ಈ ಬಾರಿಯ ಉತ್ಸವ ಸಂಬಂಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ ಮತ್ತು ಈ ಕಾರ್ಯಕ್ರಮವನ್ನು ಮುಂದುಡುವಂತೆಯೂ ಇಲ್ಲ ಏಕೆಂದರೆ ಕೊರೊನ ಮಹಾಮಾರಿ ಸದ್ಯಕ್ಕೆ ಉಲ್ಬಣವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.. ಹಾಗಾಗಿ ವರ್ಷಾಂಪ್ರತಿ ನಡೆಯುವ ಉತ್ಸವಾದಿ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ಮಾಡುವುದೆಂದು ಆಡಳಿತ ಮಂಡಳಿ ನಿರ್ಧರಿಸಿದೆ. ಆ ಪ್ರಯುಕ್ತ ಇಂದು ಬೆಳಿಗ್ಗೆ ಧ್ವಜಾರೋಹಣಗೊಂಡಿತು ಇಂದು ರಾತ್ರಿ ಬಲಿ, ವಿಶೇಷ ರಂಗಪೂಜೆ, ಮತ್ತು ದಿನಾಂಕ 16 ರಂದು ಶ್ರೀ ದೇವರಿಗೆ ಅಭಿಷೇಕ, ಉತ್ಸವ ಹಾಗೂ ದಿನಾಂಕ 17 ರಂದು ಬೆಳಿಗ್ಗೆ ಕವಾಟೋದ್ಘಾಟನೆ ಮತ್ತು ಸಂಜೆ ದೇವಳದ ಕೆರೆಯಲ್ಲಿ ಅವಭೃತ ನಡೆಸುವುದೆಂದು ನಿಶ್ಚಯಿಸಿರುತ್ತಾರೆ. ಕಾಪು ತಹಸೀಲ್ದಾರ್ 10 ಜನ ಮೇಲ್ಪಡದಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನೀಡಿರುತ್ತಾರೆ. ಆದುದ್ದರಿಂದ ಗ್ರಾಮಸ್ಥರು ಯಾರು ಕೂಡ ದೇವಸ್ಥಾನಕ್ಕೆ ಬಾರದೆ ಮನೆಯಲ್ಲಿಯೇ ಇದ್ದುಕೊಂಡು ಶ್ರೀ ದೇವರನ್ನು ಪ್ರಾರ್ಥಿಸಿ..