ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅಯ್ಯಪ್ಪ ಭಕ್ತನಿಂದ ಮಹಾನಗರಿಯಲ್ಲಿ ಪ್ರಚಾರವಿಲ್ಲದ ಜನಸೇವೆ

Posted On: 21-04-2020 06:53PM

ಪ್ರಚಾರವಿಲ್ಲದೆ ಜನ ಸೇವೆ ಮಾಡುತ್ತಿರುವ ಗುರುಸ್ವಾಮಿಗಳು ಬಹುಷಃ ಚಂದ್ರಹಾಸ ಗುರುಸ್ವಾಮಿ ಎಂಬ ಹೆಸರು ಕೇಳದೆ ಇರೋರು ಮುಂಬೈನಲ್ಲಿ ಅಥವಾ ಉಡುಪಿ ಭಾಗದಲ್ಲಿ ತೀರಾ ಕಡಿಮೆ.. ಅಯ್ಯಪ್ಪ ಸ್ವಾಮಿಯ ಭಕ್ತರಾಗಿರುವ ಇವರು ಅದೆಷ್ಟೋ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ ಭಕ್ತರಿಗೆ ಅಯ್ಯಪ್ಪ ಸ್ವಾಮಿಯನ್ನು ಯಾವ ರೀತಿ ನಿಷ್ಠೆಯಿಂದ, ಭಕ್ತಿಯಿಂದ ಮತ್ತು ನಿಯಮಾನುಸಾರ ಪೂಜಿಸಬೇಕೆಂದು ಹೇಳಿಕೊಟ್ಟವರು, ಹಿರಿಯರಾಗಿ, ಮಾರ್ಗದರ್ಶಕರಾಗಿ, ಗುರುಗಳಾಗಿ ದಾರಿ ತಪ್ಪಿದವರನ್ನು ಸರಿ ದಾರಿಗೆ ತಂದ ಮಹಾತ್ಮರು, ಕೊರೊನ ಲಾಕ್ ಡೌನ್ ಸಮಯದಲ್ಲಿ ದೂರದ ಮಹಾರಾಷ್ಟ್ರದಲ್ಲಿ ಇದ್ದರು ಕೂಡ ತಮ್ಮ ಜನಸೇವೆಯನ್ನು ಚಾಚು ತಪ್ಪದೆ ಮಾಡುತ್ತಿದ್ದಾರೆ.. ಇವರ ಬಗ್ಗೆ ಯಾಕೆ ಬರೆಯುತ್ತಿದ್ದೇನೆ ಎಂದರೆ.. ಸ್ವಲ್ಪವೂ ಅಹಂ ಇಲ್ಲದ ಇವರು ಪ್ರಚಾರದ ಗೀಳು ಬಯಸಿದವರಲ್ಲ.. ನನ್ನ ಆತ್ಮೀಯರಾದ ಪ್ರಕಾಶ್ ಕೋಟ್ಯಾನ್ ಮಡುಂಬು ಇವರು ನನಗೆ ಕರೆಮಾಡಿದಾಗ ಚಂದ್ರಹಾಸ ಗುರುಸ್ವಾಮಿಯ ಸಮಾಜಮುಖಿ ಕಾರ್ಯಗಳು ಯಾವ ರೀತಿ ನಡೆಯುತ್ತಿವೆ ಎಂದು ತಿಳಿಸಿದರು.. ಪ್ರಕಾಶ್ ಕೋಟ್ಯಾನ್ ಅವರು ಡೊಂಬಿವಿಲಿಯಲ್ಲಿ ಇರುವ ಕೇಶವ್ ಪೂಜಾರಿ ಎಂಬ ವ್ಯಕ್ತಿಯು ಬಹಳ ಸಂಕಷ್ಟದಲ್ಲಿ ಇರುವುದಾಗಿ ಗುರುಸ್ವಾಮಿಗೆ ತಿಳಿಸಿದಾಗ.. ಕ್ಷಣಾರ್ಧದಲ್ಲಿ ಕೇಶವ್ ಪೂಜಾರಿಯವರ ಬ್ಯಾಂಕ್ ವಿವರಗಳನ್ನು ಕೇಳಿ ಆರ್ಥಿಕವಾಗಿ ಸಹಕಾರವನ್ನು ನೀಡಿರುತ್ತಾರೆ.. ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಯಲ್ಲಿ ಭಾಗಿಯಾಗಿರುವ ಇವರು ಮುಂಬೈನಲ್ಲಿ, ತುಳುವರಿಗೆ, ಕನ್ನಡಿಗರಿಗೆ, ಮರಾಠಿಗಳಿಗೆ ಸೇರಿದಂತೆ ಇನ್ನು ಅನೇಕರಿಗೆ ಜಾತಿ ಮತ ನೋಡದೆ ಸಹಕರಿಸುತ್ತಿದ್ದಾರೆ, ಇವರು ಮಾಡುತ್ತಿರುವ ಸೇವೆಗೆ ಇವರು ನಂಬಿರುವ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ಅನುಗ್ರಹ, ಉಂಡಾರು ಶ್ರೀ ವಿಷ್ಣುಮೂರ್ತಿ ದೇವರ ಹಾಗೂ ಸರ್ವಶಕ್ತಿಗಳ ಆಶೀರ್ವಾದ ಇವರ ಮೇಲಿರಲಿ, ಇವರು ಮಾಡುತ್ತಿರುವ ಉದ್ಯಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಿ ಇನ್ನು ಅನೇಕರ ಸೇವೆ ಮಾಡುವಂತಾಗಲಿ... ಬರಹ : ವಿ.ಪಿ ಮಡುಂಬು