ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶೇಷ ಪ್ರಕಟಣೆ : ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲ ಮುಂದೂಡಲಾಗಿದೆ

Posted On: 22-04-2020 08:17AM

ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ ಕಾಪು ವಿಶೇಷ ಪ್ರಕಟಣೆ : ಭಕ್ತಾಭಿಮಾನಿಗಳೆ ಸದ್ರಿ ದೈವಸ್ಥಾನದಲ್ಲಿ ಇದೇ ಬರುವ ದಿನಾಂಕ ಎಪ್ರಿಲ್ 28 ರಿಂದ ಮೇ 02 ರವರಗೆ ನಡೆಯ ಬೇಕಾಗಿದ್ದ (ಪಿಲಿಕೋಲ) ನೇಮೋತ್ಸವವನ್ನು ಮುಂದೂಡಲಾಗಿದೆ, ದಿನಾಂಕ 13/04/2020 ರಂದು ದೈವಸ್ಥಾನದ ಸದಸ್ಯರು, ಊರ ಹತ್ತು ಸಮಸ್ತರು ಹಾಗೂ 16 ಕಾಣಿಕೆಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೊರೊನ ರೋಗದ ಹರಡುವಿಕೆ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು.. ಮುಂದಿನ ದಿನಾಂಕವನ್ನು ಕೊರೊನ ಲಾಕ್ಡೌನ್ ಮುಗಿದ ನಂತರ ತಿಳಿಸಲಾಗುವುದು. ✍️ ಆಡಳಿತ ಮಂಡಳಿ (ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ ಕಾಪು)