ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ ಕಾಪು
ವಿಶೇಷ ಪ್ರಕಟಣೆ : ಭಕ್ತಾಭಿಮಾನಿಗಳೆ ಸದ್ರಿ ದೈವಸ್ಥಾನದಲ್ಲಿ ಇದೇ ಬರುವ ದಿನಾಂಕ ಎಪ್ರಿಲ್ 28 ರಿಂದ ಮೇ 02 ರವರಗೆ ನಡೆಯ ಬೇಕಾಗಿದ್ದ (ಪಿಲಿಕೋಲ) ನೇಮೋತ್ಸವವನ್ನು ಮುಂದೂಡಲಾಗಿದೆ,
ದಿನಾಂಕ 13/04/2020 ರಂದು ದೈವಸ್ಥಾನದ ಸದಸ್ಯರು, ಊರ ಹತ್ತು ಸಮಸ್ತರು ಹಾಗೂ 16 ಕಾಣಿಕೆಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೊರೊನ ರೋಗದ ಹರಡುವಿಕೆ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು..
ಮುಂದಿನ ದಿನಾಂಕವನ್ನು ಕೊರೊನ ಲಾಕ್ಡೌನ್ ಮುಗಿದ ನಂತರ ತಿಳಿಸಲಾಗುವುದು.
✍️ ಆಡಳಿತ ಮಂಡಳಿ
(ಶ್ರೀ ಬ್ರಹ್ಮ ಮುಗ್ಗೆರ್ಕಳ ಹುಲಿಚಂಡಿ ದೈವಸ್ಥಾನ, ಪಡುಗ್ರಾಮ ಕಾಪು)