ಪೊಲಿಪು ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ಪೊಲಿಪು ಇದರ ವಾರ್ಷಿಕ ಮಂಗಳೋತ್ಸವವು ಊರ ಹತ್ತು ಸಮಸ್ತರಿಂದ ಸರಳವಾಗಿ ಆಚರಿಸಲಾಯಿತು . ಇದರ ಪರವಾಗಿ ಊರಿನ ಮೊಗವೀರ ಮಹಾ ಸಭಾ ಅಧ್ಯಕ್ಷರಾದ ಶ್ರೀ ರೋಹಿತಾಶ್ವ ಕುಂದರ್,ಉಪಾಧ್ಯಕ್ಷರಾದ ವಿಜಯ ಕರ್ಕೇರ , ದ. ಕ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್.ನಿ ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಸುಕುಮಾರ್ ಕುಂದರ್ ಮುಂಬೈ, ಅನಂತ್ ಕುಂದರ್ ಮುಂಬೈ, ಪೊಲಿಪು ಮೊಗವೀರ ಮಹಿಳಾ ಮಂಡಳಿ ಪೊಲಿಪು ಹಾಗೂ ಊರ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಊರ ಸುಮಾರು 200 ಕುಟುಂಬಗಳಿಗೆ ಊರ ಪರವಾಗಿ ಅಕ್ಕಿಯನ್ನು ವಿತರಿಸಲಾಯಿತು.