ಕೊರೊನ ಪರಿಣಾಮದಿಂದ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಕೊರತೆ ಇದ್ದದ್ದರಿಂದ ಕುರ್ಕಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಒಂಬತ್ತರಿಂದ ಮದ್ಯಾಹ್ನ ಒಂದರವರೆಗೆ ಕುರ್ಕಾಲು ಯುವಕ ಮಂಡಲ ಮತ್ತು ಲಯನ್ಸ್ ಕ್ಲಬ್ ಸುಭಾಸ್ನಗರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜಿಸಲಾಯಿತು, ಈ ಶಿಬಿರದಲ್ಲಿ ನಿರೀಕ್ಷೆಗೂ ಮಿಕ್ಕಿ 130 ಜನರು ರಕ್ತದಾನ ಮಾಡಿದ್ದು ಈ ಸಂದರ್ಭದಲ್ಲಿ ಗೀತಾಂಜಲಿ ಸುವರ್ಣ ಕಟಪಾಡಿ , ದೇವುಪುತ್ರ ಕೋಟ್ಯಾನ್, ವಿಶಾಖ್ ಜಿ ಶೆಟ್ಟಿ, ದಿನಕರ ಶೆಟ್ಟಿ, ಡಿ ಆರ್ ಕೋಟ್ಯಾನ್, ಪ್ರವೀಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು..