ಇಂದಿನಿಂದ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ7 ರವರೆಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಪಡುಬಿದ್ರಿ ಪೇಟೆಭಾಗದಲ್ಲಿ ಕೆಲವು ಕಡೆಯಲ್ಲಿ ಜನರು ಸಾಮಾಜಿಕ ಅಂತರ ಕಾಯದೆ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕರುಗಳು ಮೌನವಹಿಸಿದ್ದಾರೆ. ನಿನ್ನೆಯಂತೆ ಇಂದು ಮದ್ಯ ಖರೀದಿಸಲು ಜನ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಡಿಭಾಗದಲ್ಲಿಯೂ ಜನರು ಏನೇನೋ ಸಬೂಬು ನೀಡಿ ಬರಲು ಪ್ರಯತ್ನಿಸುವುದು ಕಂಡು ಬಂದಿದೆ. ಪೇಟೆಯಲ್ಲಿ ವಾಹನಗಳಲ್ಲಿ ಇಂತಿಷ್ಟೇ ಜನ ಪ್ರಯಾಣಿಸಬೇಕೆಂಬ ನಿಯಮವಿದ್ದರೂ ಜನ ಪಾಲಿಸುತ್ತಿಲ್ಲ. ಈ ಬಗ್ಗೆ ಪೋಲೀಸರು ಮೌನವಹಿಸಿರುವುದು ಕಂಡು ಬಂದಿದೆ.