ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಲಾಕ್ಡೌನ್ ಸಡಿಲಿಕೆ, ಸಾಮಾಜಿಕ ಅಂತರ, ನಿಯಮ ಪಾಲಿಸದ ಜನತೆ

Posted On: 05-05-2020 01:35PM

ಇಂದಿನಿಂದ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ7 ರವರೆಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಪಡುಬಿದ್ರಿ ಪೇಟೆಭಾಗದಲ್ಲಿ ಕೆಲವು ಕಡೆಯಲ್ಲಿ ಜನರು ಸಾಮಾಜಿಕ ಅಂತರ ಕಾಯದೆ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕರುಗಳು ಮೌನವಹಿಸಿದ್ದಾರೆ. ನಿನ್ನೆಯಂತೆ ಇಂದು ಮದ್ಯ ಖರೀದಿಸಲು ಜನ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಡಿಭಾಗದಲ್ಲಿಯೂ ಜನರು ಏನೇನೋ ಸಬೂಬು ನೀಡಿ ಬರಲು ಪ್ರಯತ್ನಿಸುವುದು ಕಂಡು ಬಂದಿದೆ. ಪೇಟೆಯಲ್ಲಿ ವಾಹನಗಳಲ್ಲಿ ಇಂತಿಷ್ಟೇ ಜನ ಪ್ರಯಾಣಿಸಬೇಕೆಂಬ ನಿಯಮವಿದ್ದರೂ ಜನ ಪಾಲಿಸುತ್ತಿಲ್ಲ. ಈ ಬಗ್ಗೆ ಪೋಲೀಸರು ಮೌನವಹಿಸಿರುವುದು ಕಂಡು ಬಂದಿದೆ.