ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಳುನಾಡ್ದ ಪ್ರತಿಭೆಲು ಆಯೋಜಿಸಿದ 'ನಲಿಪು ನವಿಲೆ' ನೃತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟ

Posted On: 15-05-2020 07:11PM

ತುಳುನಾಡ್ದ ಪ್ರತಿಭೆಲು ಫೇಸ್ಬುಕ್ ತಂಡ ಆಯೋಜಿಸಿದ "ನಲಿಪು ನವಿಲೆ" ನೃತ್ಯ ಸ್ಪರ್ಧೆಯಲ್ಲಿ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದು, ನಾವೆಲ್ಲರೂ ಸಂತಸ ಅನುಭವಿಸಿದ್ದೇವೆ. ಭಾಗವಹಿಸಿದ ಸ್ಪರ್ಧಿಗಳ ಕಲಾ ಉತ್ಸಾಹ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವಲ್ಲಿ ತಮ್ಮ ತಯಾರಿ ನಡೆಸಿದ ರೀತಿ ನಮಗೆಲ್ಲರಿಗೂ ಸ್ಫೂರ್ತಿದಾಯಕ. ಕರಾವಳಿಯ ಪ್ರತಿಭೆಗಳಿಗೆ ಉನ್ನತ ಮಟ್ಟದ ವೇದಿಕೆ ನಿರ್ಮಾಣ ನಮ್ಮ ಉದ್ದೇಶವಾಗಿದ್ದು, ಒದಗಿಸಿದ ಅವಕಾಶವನ್ನು ಅತ್ಯುನ್ನತ ಮಟ್ಟಿನಲ್ಲಿ ಸದುಪಯೋಗ ಗೊಳಿಸಿದ ಸ್ಪರ್ಧಿಗಳನ್ನು ಕಂಡ ತುಳುನಾಡ್ದ ಪ್ರತಿಭೆಲು ತಂಡದ ಸದಸ್ಯರು ನಾವೇ ಧನ್ಯರು. ಭಾಗವಹಿಸಿದ ಸ್ಪರ್ಧಿಗಳ ಕಲಾ ಉತ್ಸಾಹ, ಚಾತುರ್ಯಕ್ಕೆ ನಮ್ಮ ತಂಡದ ಪರವಾಗಿ ಸರ್ವರಿಗೂ ಅನಂತಾನಂತ ವಂದನೆಗಳು. ಸ್ಪರ್ಧೆಯ ಫಲಿತಾಂಶ: ತೀರ್ಪುಗಾರರಾದ ಸುಜಯ್ ಶಾನಭಾಗ್ ಇವರು, ಸ್ಪರ್ಧಿಗಳ ನೃತ್ಯವನ್ನು ಕಂಡು ಈ ರೀತಿ ತೀರ್ಪು ನೀಡಿದ್ದಾರೆ: ೧) ವೃಷ್ಟಿ ನಾಯಕ್ Contestant no:೨೯ ೨) ತ್ರಿಶಾ ಪೂಜಾರಿ Contestant no:೪೧ ೩) ತನ್ವಿ ಶೆಟ್ಟಿ Contestant no:೫೫ ೪) ಖುಷಿ ಶೆಟ್ಟಿ Contestant no:೨೩ ೫) ಸಂಪೂರ್ಣ ಮತ್ತು ಸಿದ್ದಿ Contestant no:೩೩ ಸ್ಪರ್ಧೆಯ ವಿಜೇತರಿಗೆ ತುಳುನಾಡ್ದ ಪ್ರತಿಭೆಲು ತಂಡ ಶುಭಕೋರುತ್ತದೆ.