ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

10 ವರ್ಷಗಳ 120 ಅಮಾವಾಸ್ಯೆಗಳನ್ನು ರಾಮೇಶ್ವರದಲ್ಲಿ ಕಳೆದ ಇನ್ನಂಜೆಯ ಐ ಕೃಷ್ಣಮೂರ್ತಿ

Posted On: 16-05-2020 07:33AM

ಆಸ್ತಿಕ ಅಭಿಮಾನಿಗಳಿಗೂಂದು ಸಂತಸದ ಸುದ್ದಿ! ಉಡುಪಿ ಜಿಲ್ಲೆ। ಕಾಪು ತಾಲೂಕು। ಇನ್ನಂಜೆ ಗ್ರಾಮ। ಪಲಿಮಾರು ಮಠದ ಶಿಷ್ಯವರ್ಗದವರಾದ ಐ.ಕೃಷ್ಣಮೂರ್ತಿ ಇವರು, ಇನ್ನಂಜೆಯಿಂದ ತಮಿಳುನಾಡಿನ ರಾಮೇಶ್ವರಕ್ಕೆ ಪ್ರತಿ ತಿಂಗಳ ಅಮಾವಾಸ್ಯೆಯ ಹಿಂದಿನ ದಿನಕ್ಕೆ ಸರಿಯಾಗಿ ಇಷ್ಟರವರೆಗೂ ಚಾಚು ತಪ್ಪದೆ ತೆರಳಿ, ಅಮಾವಾಸ್ಯೆಯಂದು ಅಲ್ಲಿ ಪಿತೃ ಮೋಕ್ಷವೆಂಬ ವೃತವನ್ನು ಕ್ಷೇತ್ರ ವಿಧಿಯ ರೂಪದಲ್ಲಿ ಮಾಡುತ್ತಾ ಬರುತ್ತಿದ್ದು, ಹತ್ತು ವರ್ಷಗಳ ನೂರ ಇಪ್ಪತ್ತು ಅಮಾವಾಸ್ಯೆಗಳನ್ನು ಇದೇ ಮೇ ತಿಂಗಳ 22ನೇ ತಾರೀಕಿನಂದು ಕ್ಷೇತ್ರ ವಿಧಿಯನ್ನು ಪೂರೈಸಿ, ಇನ್ನಂಜೆಗೆ ಮರಳಿ ಬಂದು, ಮುಂದಿನ ಅಮಾವಾಸ್ಯೆಯಿಂದ ಈ ವಿಧಿಯನ್ನು ಕುಂಜಾರು ಗಿರಿಯ ಪಾಜಕ ಕ್ಷೇತ್ರದಲ್ಲಿ ಮುಂದುವರಿಸಲು ನಿರ್ಧರಿಸಿರುತ್ತಾರೆ, ಹಾಗೂ ಈ ವೃತದ ಇನ್ನೊಂದು ಭಾಗವಾದ ಕಾಸರಗೋಡಿನ ಮಧೂರು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕೊಲ್ಲೂರು ಶ್ರೀ ಮೂಕಾಂಬಿಕೆಯ ದೇವಸ್ಥಾನದ ತನಕ, ದಿನಕ್ಕೊಂದು ದೇವಸ್ಥಾನದಲ್ಲಿ ಈ ಪಿತೃ ಮೋಕ್ಷ ಪ್ರಾಪ್ತಿಗೆ ಅನುಗ್ರಹ ರೂಪದ ಅಗ್ರ ಪೂಜೆ ಎಂಬ ಸೇವೆಯನ್ನು ನೂರ ಎಂಟು ದೇವಸ್ಥಾನಗಳಲ್ಲಿ ಸಲ್ಲಿಸಲಿದ್ದಾರೆ. ಆ ಬಳಿಕ ಸಾವಿರದ ಎಂಟು ಬ್ರಾಹ್ಮಣೋತ್ತಮರಿಗೆ ಫಲ ತಾಂಬೂಲ, ದಕ್ಷಿಣೆಯ ಬ್ರಾಹ್ಮಣಾರಾಧನೆ, ಅದರ ನಂತರ ಕನ್ಯಾಕುಮಾರಿಯಿಂದ ಬದರಿಯವರೆಗೆ ತೀರ್ಥಯಾತ್ರೆಯ ಸೇವೆಯನ್ನು ಕೈಗೊಳ್ಳಲಿದ್ದಾರೆ.ಈ ವೃತದ ಕೊನೆಯ ಅಂಗವಾಗಿ ಪ್ರಾಯಶ್ಚಿತ್ತ ಹೋಮಗಳನ್ನು ರಾಮೇಶ್ವರಂನ ದಿವ್ಯ ಸಾನಿಧ್ಯದಲ್ಲಿ ನಡೆಸಲಿದ್ದಾರೆ.. ಈ ಸಂದರ್ಭದಲ್ಲಿ, ಅ ವರ್ಗ ಈ ವರ್ಗ ಎಂಬ ಭೇದವಿಲ್ಲದೆ ಯಾರೇ ಆಗಲಿ ಈ ವೃತದ ಮೇಲೆ ಅಭಿಮಾನವಿಟ್ಟು, ಯಥಾಶಕ್ತಿ ದಕ್ಷಿಣೆಯ ರೂಪದ ದೇಣಿಗೆಯನ್ನು ಈ ವೃತದ ಯಶಸ್ಸಿಗಾಗಿ, ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆಗೆ ಸಲ್ಲಿಸಬಹುದಾಗಿದೆ. M/S :- Shri Padmanandini Home Industries A/C number (Current account): 0822000100006001 IFSC: KARB0000082 Branch: Bantakal Udupi ಇತೀ, ಐ.ಕೃಷ್ಣಮೂರ್ತಿ ಅಭಿಮಾನಿಗಳು