ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮುಂಬೈ ತುಳುವರು ಊರಿನಲ್ಲಿ ಕ್ವಾರಂಟೈನ್ ಆದರೂ ಸಮಾಜಸೇವೆ ಬಿಟ್ಟಿಲ್ಲ

Posted On: 18-05-2020 12:46PM

ಮುಂಬೈನಿಂದ ಬಂದು ಕ್ವಾರಂಟೈನ್ನಲ್ಲಿ ಇದ್ದು ಸುಮ್ಮನೆ ಕೂರದೆ ಅಲ್ಲಿಯೂ ಸಮಾಜ ಸೇವೆ ಮಾಡಿದ ತುಳುವರು. ಮುಂಬೈಯವರು ಯಾವತ್ತೂ ತನ್ನ ಊರಿಗೆ, ತಾಲೂಕು, ಜಿಲ್ಲೆಗಾಗಿ ಸೇವೆ ಮಾಡಿದವರು, ಅದನ್ನು ಈಗ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿನ್ನೆ ಮುಂಬೈನಿಂದ ಬಂದ ಒಂದು ತಂಡವನ್ನು ಮರೋಡಿಯ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಯಿತು.. ಆದರೆ ಕ್ವಾರಂಟೈನ್ ಇದ್ದ ಸದಸ್ಯರು ಕೂತು,ಮಲಗಿ ಸಮಯ ವ್ಯರ್ಥ ಮಾಡದೆ ಶಾಲೆ ಹೊರಾಂಗಣದ ಸ್ವಚ್ಛತಾ ಕಾರ್ಯಕ್ರಮ ಶುರುಮಾಡಿದ್ದಾರೆ. ಹಾಗೂ ತೆಂಗಿನ ಮರದ ಬುಡ ಸ್ವಚ್ಛ ಮಾಡುವ ಕೆಲಸ ಮಾಡಿದರು. ಸಮಯವನ್ನು ವ್ಯರ್ಥ ಮಾಡದೆ ಸಮಾಜದ ಕೆಲಸಕ್ಕಾಗಿ ತೊಡಗಿದ ಎಲ್ಲರಿಗೂ ಧನ್ಯವಾದಗಳು..