ಲಾಕ್ಡೌನ್ ಸಡಿಲಿಕೆಯಾದರು ಜನರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಇದರ ವ್ಯಾಪ್ತಿಗೆ ಒಳಪಡುವ ಸಮಾಜ ಬಾಂಧವರಿಗಾಗಿ ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಗೌರವಾಧ್ಯಕ್ಷರಾದ ವಾಸು ಡಿ. ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮಣ್ ಬಿ. ಅಮೀನ್, ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶೀನ ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಸಾದ್ ವೈ. ಕೋಟ್ಯಾನ್,ವೀರೇಂದ್ರ ಎನ್., ಲಕ್ಷ್ಮಣ ಡಿ. ಪೂಜಾರಿ, ಪ್ರಶಾಂತ್ ಕುಮಾರ್, ಶಂಕರ್ ಪಿ. ಸುವರ್ಣ, ಪೂರ್ಣಿಮ ಕೆ., ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾಕ್ಷಿ ಕೆ.ಕೋಟ್ಯಾನ್ ಸದಸ್ಯರಾದ ಸುಚರಿತ ಎಲ್. ಅಮೀನ್, ಜಯಂತಿ ಜಿ.,ಸಾಧನ ಎಚ್. ಮುಂತಾದವರು ಉಪಸ್ಥಿತರಿದ್ದರು.