ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಡ ಕುಟುಂಬಕ್ಕೆ ಅಸರೆಯಾದ ಕಾರ್ಕಳದ ಕಾಂತಾವರ ಗ್ರಾಮದ ತಂಡ..

Posted On: 01-06-2020 08:04PM

ಕಳೆದ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿರುವ ಕಾಂತಾವರ ಗ್ರಾಮ ದ ಬಡಕುಟುಂಬವೊಂದರ ಮುರುಕಲು ಮನೆಯ ರಿಪೇರಿ ಬಗ್ಗೆ ಕೆಲವು ಚರ್ಚೆಗಳು ನಡೆದಿತ್ತು. ಈ ಸಮಸ್ಯೆಯನ್ನು ಕಂಡ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯ ಎಸ್ ಕೋಟ್ಯಾನ್ ಹಾಗೂ ಗೆಳೆಯರ ಬಳಗ ಕಾಂತಾವರ ಇವರ ತಂಡ ಸೇರಿ,ಲಾಕ್ ಡೌನ್ ನಡುವೆಯೂ ಕಳೆದ ಎರಡು ವಾರದ ಸತತ ಪ್ರಯತ್ನದಿಂದ ಮನೆ ನಿರ್ಮಾಣ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯತ್ನ ವೊಂದಿದ್ದರೆ ಯಾವುದೇ ಕೆಲಸ ಕಠಿಣ ವಲ್ಲ ಎಂದು ಈ ತಂಡ ತೋರಿಸಿಕೊಟ್ಟಿದೆ..ಇದು ಬೇರೆ ಸಂಘಟನೆಗಳಿಗೆ ಮಾದರಿಯಾಗಲಿ..ಇನ್ನು ಮುಂದೆಯೂ ನಿಮ್ಮಿಂದ ಇಂತಹ ಸಮಾಜ ಸೇವೆ ನಡೆಯಲಿ..ಕಾಂತಾವರದ ಕಾಂತೇಶ್ವರ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ....ವೈಯಕ್ತಿಕ ಟೀಕೆ ಗಳನ್ನು ನಿಮ್ಮ ಸಾಧನೆ ಯಿಂದ ಉತ್ತರಿಸಿ... ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸಿದ ಸಹಕರಿಸಿದ ಎಲ್ಲಾ ಸಹೃದಯರಿಗೆ ಧನ್ಯವಾದಗಳು...