ಕಳೆದ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿರುವ ಕಾಂತಾವರ ಗ್ರಾಮ ದ ಬಡಕುಟುಂಬವೊಂದರ ಮುರುಕಲು ಮನೆಯ ರಿಪೇರಿ ಬಗ್ಗೆ ಕೆಲವು ಚರ್ಚೆಗಳು ನಡೆದಿತ್ತು. ಈ ಸಮಸ್ಯೆಯನ್ನು ಕಂಡ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯ ಎಸ್ ಕೋಟ್ಯಾನ್ ಹಾಗೂ ಗೆಳೆಯರ ಬಳಗ ಕಾಂತಾವರ ಇವರ ತಂಡ ಸೇರಿ,ಲಾಕ್ ಡೌನ್ ನಡುವೆಯೂ ಕಳೆದ ಎರಡು ವಾರದ ಸತತ ಪ್ರಯತ್ನದಿಂದ ಮನೆ ನಿರ್ಮಾಣ ಕಾರ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯತ್ನ ವೊಂದಿದ್ದರೆ ಯಾವುದೇ ಕೆಲಸ ಕಠಿಣ ವಲ್ಲ ಎಂದು ಈ ತಂಡ ತೋರಿಸಿಕೊಟ್ಟಿದೆ..ಇದು ಬೇರೆ ಸಂಘಟನೆಗಳಿಗೆ ಮಾದರಿಯಾಗಲಿ..ಇನ್ನು ಮುಂದೆಯೂ ನಿಮ್ಮಿಂದ ಇಂತಹ ಸಮಾಜ ಸೇವೆ ನಡೆಯಲಿ..ಕಾಂತಾವರದ ಕಾಂತೇಶ್ವರ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ....ವೈಯಕ್ತಿಕ ಟೀಕೆ ಗಳನ್ನು ನಿಮ್ಮ ಸಾಧನೆ ಯಿಂದ ಉತ್ತರಿಸಿ... ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸಿದ ಸಹಕರಿಸಿದ ಎಲ್ಲಾ ಸಹೃದಯರಿಗೆ ಧನ್ಯವಾದಗಳು...