ಕಾಪು : ಮಜೂರು ರೈಲ್ವೆ ಸೇತುವೆ ಬಳಿ ಆಗ್ನಿ ಅವಘಡ, ಇಂದು ಮಧ್ಯಾಹ್ನ ಮಜೂರು ಬ್ರಹ್ಮ ಬೈದರ್ಕಳ ಗರಡಿಗೆ ಹೋಗುವ ದಾರಿಯಲ್ಲಿ ಇರುವ ರೈಲ್ವೆ ಸೇತುವೆ ಬಲಿ ಆಕಸ್ಮಿಕ ಬೆಂಕಿ ಹಿಡಿದಿದ್ದು.. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಸಂದರ್ಭದಲ್ಲಿ ಸ್ಥಳೀಯರಾದ ಅಪೇಕ್ಷಾ ಶೆಟ್ಟಿ ಇವರು ಸರಿಯಾದ ಸಮಯಕ್ಕೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಅನಾಹುತ ಆಗುವುದನ್ನು ತಪ್ಪಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ . ಆಗ್ನಿಶಾಮಕದಳ ಸರಿಯಾದ ಸಮಯಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಈ ಅನಾಹುತದಿಂದ ಯಾವುದೇ ರೀತಿಯ ನಷ್ಟ ಆಗಿಲ್ಲ ಎಂದು ತಿಳಿದು ಬಂದಿದೆ.