Updated News From Kaup
ಇತಿಹಾಸ ಪ್ರಸಿದ್ಧ ಪಡುಬಿದ್ರಿ ಚೆಂಡಿಗೆ ಚಾಲನೆ
Posted On: 13 May 2026, 05:25 PM
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಮರುದಿನ ನಡೆಯುವ ಇತಿಹಾಸ ಪ್ರಸಿದ್ಧ ಪಡುಬಿದ್ರಿ ಚೆಂಡಿಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ದೇವಳದ ಅರ್ಚಕರಾದ ಪದ್ಮನಾಭ ಭಟ್ ಪೂಜೆ ಸಲ್ಲಿಸಿ, ಚೆಂಡಿನ ಸೇವಾಕರ್ತರಾದ ಬೇಬಿ ಪೂಜಾರ್ತಿ ಮನೆಯವರು ಚೆಂಡನ್ನು ನಡ್ಸಾಲು ಗುತ್ತು ಶ್ರೀನಾಥ ಹೆಗ್ಡೆ ಮತ್ತು ಬಗ್ಗೇಡಿ ಗುತ್ತು ಶೇಖರ ಶೆಟ್ಟಿ ಸಮ್ಮುಖ ಹಸ್ತಾಂತರಿಸಿದರು.
ಪಾದೆಬೆಟ್ಟು, ನಡ್ಸಾಲು ಯುವಕರ ತಂಡ ದೇವಳದ ಮುಂಭಾಗದಲ್ಲಿ ಚೆಂಡು ಆಡುವ ಮೂಲಕ ಪಡುಬಿದ್ರಿ ಚೆಂಡು ಪ್ರತಿವರ್ಷ ಜರಗುತ್ತಿದೆ.
ಈ ಸಂದರ್ಭ ದೇಗುಲದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೆ. ರಾಜಗೋಪಾಲ ಉಪಾಧ್ಯಾಯ, ಪೇಟೆಮನೆ ಪ್ರಕಾಶ್ ಶೆಟ್ಟಿ, ಅನಿಲ್ ಶೆಟ್ಟಿ, ಸೇವಾಕರ್ತರ ಮನೆಯವರಾದ
ಅನೂಜ್ ಕರ್ಕೇರ, ಧನುಷ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಮೇ 12 - 13 : ಕೋಟೆ ಶ್ರೀ ಗಡು ಮಾರಿಯಮ್ಮ, ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು ರಾಣಿಕೇರಿಯಲ್ಲಿ ಕಾಲಾವಧಿ ರಾಶಿ ಮಾರಿಪೂಜೆ
Posted On: 11 May 2026, 08:05 PM
ಕಾಪು : ಇಲ್ಲಿನ ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು ರಾಣಿಕೇರಿಯಲ್ಲಿ ಮೇ12 ಮತ್ತು 13 ರಂದು ಕಾಲಾವಧಿ ರಾಶಿ ಮಾರಿಪೂಜೆ ಜರಗಲಿದೆ.
ಮೇ 12, ಮಂಗಳವಾರ ರಾತ್ರಿ ಗಂಟೆ 7:30 ಕ್ಕೆ ಶ್ರೀ ಮಾರಿಯಮ್ಮಕುಣಿತ ಭಜನಾ ಮಂಡಳಿ, ಮಲ್ಲಾರ್ ಇವರಿಂದ ಕುಣಿತ ಭಜನೆ, ಸಾಕ್ಷಿ ಕಲಾವಿದೆರ್ ಬೆಳಪು ಇವರಿಂದ ಕಾಮಿಡಿ 20-20 ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 12ಕ್ಕೆ
ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ
ಹಾಗೂ ರಾಶಿ ಪೂಜಾ ಮಹೋತ್ಸವ ಜರಗಲಿದೆ.
ಮೇ13 ರಂದು, ಬುಧವಾರ ಬೆಳಿಗ್ಗೆ ಗಂಟೆ 6 ಕ್ಕೆ
ಅರಮನೆ ಪೂಜೆ, ಮಧ್ಯಾಹ್ನ ಗಂಟೆ 12:30ಕ್ಕೆ
ಅನ್ನಸಂತರ್ಪಣೆ, ಮಧ್ಯಾಹ್ನ ಗಂಟೆ 3 ಕ್ಕೆ :
ಮಹಾಪೂಜೆ, ಶ್ರೀ ಮಾರಿಯಮ್ಮ ಹಾಗೂ ಚಾಮುಂಡೇಶ್ವರೀ ದೇವಿಯ ದರ್ಶನ ಸೇವೆ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು
ಕೋಟೆ ಶ್ರೀ ಗಡು ಮಾರಿಯಮ್ಮ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ಕುತ್ಯಾರು ಪಡುಮನೆ ಕುಟುಂಬಸ್ಥರಿಂದ ಹರಕೆಯ ಮಾರಿಪೂಜೆ ಸೇವೆ
Posted On: 11 May 2026, 07:55 PM
ಕಾಪು : ಕುತ್ಯಾರು ಪಡುಮನೆ ಕುಟುಂಬಸ್ಥರಿಂದ ಮೇ 12 ಮತ್ತು 13ರಂದು ಕಾಪು ಕಲ್ಯ ಮೂರನೇ ಮಾರಿಗುಡಿ ಶ್ರೀ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಹರಕೆಯ ಮಾರಿಪೂಜೆ ಸೇವೆ ನಡೆಯಲಿದೆ.
ಅ ಪ್ರಯುಕ್ತ ಅದೇ ದಿನ ಸಂಜೆ 4.30 ಕ್ಕೆ ಸರಿಯಾಗಿ ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದಿಂದ ಹೂ ಹಿಂಗಾರ ಮೆರವಣಿಗೆ, ರಾತ್ರಿ ಶ್ರೀ ದೇವಿಯ ಸನ್ನಿದಿಗೆ ರಥದಲ್ಲಿ ಮಾರಿಯಮ್ಮನ ಆಗಮನ, ಅರಮನೆ ಪೂಜೆ, ನರ್ತನ ಸೇವೆ, ಜೊತೆಗೆ ಅನ್ನಸಂತರ್ಪಣೆ ಹಾಗೂ ಮರುದಿನ ಮೇ 13 ರ ಸಂಜೆ ಶ್ರೀ ದೇವಿಯ ನರ್ತನ ಸೇವೆಯಲ್ಲಿ ಭಾಗಿಯಾಗಿ ಶ್ರೀ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಕುತ್ಯಾರು ಪಡುಮನೆ ಕುಟುಂಬಸ್ಥರ ಪರವಾಗಿ ಕಲ್ಯಾಣಿ ಮೂಲ್ಯ ಹಾಗೂ ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ತುಳುನಾಡ ಕಲಾವಿದರು ಪಡುಬಿದ್ರಿ ರಜತ ಸಂಭ್ರಮ : ಸಂಗೀತ ರಸಸಂಜೆ, ನೃತ್ಯ ವೈಭವ
Posted On: 07 May 2026, 01:19 PM
ಪಡುಬಿದ್ರಿ : ತುಳುನಾಡ ಕಲಾವಿದರು (ರಿ.) ಪಡುಬಿದ್ರಿ ಇದರ ರಜತ ಸಂಭ್ರಮದ ಪ್ರಯುಕ್ತ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 9, ಶನಿವಾರ ರಾತ್ರಿ 8 ಗಂಟೆಗೆ ದೇವಳದ ವಠಾರದಲ್ಲಿ ‘ತಾಳ-ತರಂಗ-2026 ಸಂಗೀತ ರಸಸಂಜೆ’, ‘ನೃತ್ಯ ವೈಭವ’ ಕಾರ್ಯಕ್ರಮ ಜರಗಲಿದೆ ಎಂದು ತುಳುನಾಡ ಕಲಾವಿದರು ಇದರ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ ಹೇಳಿದರು.
ಅವರು ಗುರುವಾರ ಕಾಪು ಪತ್ರಿಕಾ ಭವನದಲ್ಲಿಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹರಿಪ್ರಸಾದ್ ರೈ. ಉದ್ಘಾಟಿಸಲಿದ್ದಾರೆ.
ಸಂಸ್ಥೆಯು ಕಳೆದ 25 ವರ್ಷಗಳಿಂದ ಗ್ರಾಮೀಣ ಪ್ರದೇಶದ ಕಲಾ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ, ಕಲಾ ಪ್ರತಿಭೆಗಳನ್ನು ಬೆಳೆಸಿ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರತಿ ವರ್ಷ ಕಲಾ ಕ್ಷೇತ್ರದ ಸಾಧಕರಿಗೆ "ತುಳುನಾಡ ಸಿರಿ" ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಈ ಬಾರಿ 4 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ. ಸಾಮಾಜಿಕ, ಧಾರ್ಮಿಕ, ಕಲಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಿದ್ದೇವೆ. ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸಂಗೀತ ರಸಸಂಜೆಯ ಜೊತೆಗೆ ಓಂಕಾರ್ ಕಲಾಸಂಗಮ ಪಡುಬಿದ್ರಿ ಇವರಿಂದ ನೃತ್ಯ ವೈಭವ ಜರಗಲಿದೆ.
ಸಂಸ್ಥೆಯ ಗೌರವ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಚಂದ್ರಹಾಸ್ ಶೆಟ್ಟಿ ಪೂಲ, ನವೀನ್ ಚಂದ್ರ ಜೆ. ಶೆಟ್ಟಿ, ಗಣೇಶ್ ಆಚಾರ್ಯ ಉಚ್ಚಿಲ, ವಿಜಯ ಮೆಂಡನ್, ಅಶೋಕ್ ಸಾಲ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಚನ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸುಧಾಕರ್ ಕೆ., ಜೊತೆ ಕಾರ್ಯದರ್ಶಿ ದಿನೇಶ್ ಪಡುಬಿದ್ರಿ ಉಪಸ್ಥಿತರಿದ್ದರು.
ಕಾಪು : ಇನ್ನಂಜೆ ಎಸ್. ವಿ. ಎಚ್ ಶಾಲೆಗೆ ಉಚಿತ ಶಿಕ್ಷಣಕ್ಕಾಗಿ ರೂ.1,67,875 ಧನ ಸಹಾಯ
Posted On: 07 May 2026, 09:01 AM
ಕಾಪು : ಇನ್ನಂಜೆ ಎಸ್. ವಿ. ಎಚ್ ಕನ್ನಡ ಮಾಧ್ಯಮ ಶಾಲೆಯ ಉಚಿತ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಇನ್ನಂಜೆಯ ತಂಡವು ರೂ.1,67,875 ಸಹಾಯ ಧನದ ಚೆಕ್ ನ್ನು ಶಾಲಾ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಉಚಿತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಆಯೋಜನೆಗೊಂಡ ಇನ್ನಂಜೆ ಪ್ರೀಮಿಯರ್ ಲೀಗ್ ಏಪ್ರಿಲ್ 25, 26 ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು.
ಈ ಸಂದರ್ಭ ಎಸ್.ವಿ.ಎಚ್ ಸಂಸ್ಥೆಯ ಉಪನ್ಯಾಸಕರು, ಇನ್ನಂಜೆ ತಂಡದ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ
Posted On: 07 May 2026, 08:48 AM
ಕಾಪು : ಹಲವು ವ್ಯಕ್ತಿಗಳ ಕನ್ನಡದ ಒಲವು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಗಿದೆ. ಇದು ಇಂದು ಸಾರ್ಥಕ್ಯ ರೂಪು ತಳೆದಿದೆ. ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ಕನ್ನಡ, ಹೃದಯದ ಭಾಷೆ. ಕನ್ನಡದ ಓದಿನ ಅಭಿರುಚಿಗೆ ಮಕ್ಕಳನ್ನು ತೊಡಗಿಸಿ, ಕನ್ನಡದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅವಕಾಶವಿದೆ. ಭಾಷೆಗೆ ಜಾತಿ, ಮತದ ಭೇದಭಾವವಿಲ್ಲ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಘಟಕದ ವತಿಯಿಂದ ಕಾಪು ಸಾರ್ವಜನಿಕ ಗ್ರಂಥಾಲಯದಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇದರ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡನಾಡಿದರು.
ಸನ್ಮಾನ : ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯಗಳ ಗ್ರಂಥ ಮೇಲ್ವಿಚಾರಕರುಗಳಾದ ಆಶಾ ಉಳಿಯಾರಗೋಳಿ, ಪೂರ್ಣಿಮಾ ಕಾಪು, ನಸ್ರಿನ್ ಫಾತಿಮಾ ಮಲ್ಲಾರು ಇವರನ್ನು ಪರಿಷತ್ತು ವತಿಯಿಂದ ಸನ್ಮಾನಿಸಿ ಮೂರೂ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಲಾಯಿತು. ಗ್ರಂಥಾಲಯದ ಮೇಲ್ವಿಚಾರಕರುಗಳಿಂದ ಪರಸಭೆಯ ನೂತನ ಅಧ್ಯಕ್ಷರಾದ ಮೋಹಿನಿ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಪುರಸಭಾ ಮುಖ್ಯ ಅಧಿಕಾರಿ ನೀಲಕಂಠ ಮೇಸ್ತ ದಿಕ್ಸೂಚಿ ಭಾಷಣ ಮಾಡಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯದ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ,, ಕಸಾಪ ಜಿಲ್ಲಾ ಸಮಿತಿ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯ ನರಂಹಮೂರ್ತಿ ರಾವ್, ತಾಲೂಕು ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ಮಧುಕರ್ ಎಸ್.ಕಲ್ಯಾ, ಪುರಸಭಾ ಕೌನ್ಸಿಲರ್ಗಳಾದ ಅನಿಲ್ ಕುಮಾರ್, ಸರಿತಾ ಉಪಸ್ಥಿತರಿದ್ದರು.
ತಾಲೂಕು ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಯಶೋದಾ ಎಲ್ಲೂರು ಸನ್ಮಾನಿತರನ್ನು ಪರಿಚಯಿಸಿದರು. ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು. ಸಮಿತಿ ಸದಸ್ಯರಾದ ಸತ್ಯಸಾಯಿ ಪ್ರಸಾದ್ ನಿರೂಪಿಸಿದರು.
ಮೇ.5 : ಕಾಪು - ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ
Posted On: 03 May 2026, 06:27 PM
ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕಸಾಪ ಘಟಕದ ಸಹಭಾಗಿತ್ವದಲ್ಲಿ ಮೇ.5, ಮಂಗಳವಾರ ಅಪರಾಹ್ನ ಗಂಟೆ 3ಕ್ಕೆ ಕಾಪು ಸಾರ್ವಜನಿಕ ಗ್ರಂಥಾಲಯದಲ್ಲಿ ಕಸಾಪ 112ನೇ ಸಂಸ್ಥಾಪನಾ ದಿನಾಚರಣ ಕಾರ್ಯಕ್ರಮ ಜರುಗಲಿದೆ.
ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸುವರು.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡುವರು. ಕಾಪು ಪುರಸಭಾ ಮುಖ್ಯ ಅಧಿಕಾರಿ ನೀಲಕಂಠ ಮೇಸ್ತ ದಿಕ್ಸೂಚಿ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ಕಾಪು ತಾಲೂಕು ತಹಶೀಲ್ದಾರ್ ಅನಂತ ಶಂಕರ ಬಿ, ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ, ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿ ಕಟ್ಟಿಂಗೆರಿ ದೇವದಾಸ್ ಹೆಬ್ಬಾರ್ ಭಾಗವಹಿಸುವರು.
ಈ ಸಂದರ್ಭದಲ್ಲಿ ಕಾಪು ಪುರಸಭಾ ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರಾದ ಪೂರ್ಣಿಮಾ ಕಾಪು, ಆಶಾ ಉಳಿಯಾರಗೋಳಿ, ನಸ್ರಿನ್ ಫಾತಿಮಾ ಮಲ್ಲಾರು ಇವರನ್ನು ಸನ್ಮಾನಿಸಲಾಗುವುದು ಮತ್ತು ಗ್ರಂಥಾಲಯಗಳಿಗೆ ಕಾಪು ಸಾಹಿತ್ಯ ಪರಿಷತ್ತು ವತಿಯಿಂದ ಪುಸ್ತಕಗಳನ್ನು ಹಸ್ತಾಂತರಿಸಲಾಗುವುದು ಎಂದು ಕಸಾಪ ಕಾಪು ತಾಲೂಕು ಘಟಕದ ಪ್ರಕಟನೆ ತಿಳಿಸಿದೆ.
ಹೆಜಮಾಡಿಯ ಶಿವ ಸಾಗರ್ ಹೋಟೆಲ್ ದ್ವಿತೀಯ ವರ್ಷಕ್ಕೆ ಪಾದಾರ್ಪಣೆ
Posted On: 01 May 2026, 01:17 PM
ಹೆಜಮಾಡಿ : ಪ್ರಭಾಕರ ಎಸ್. ಪೂಜಾರಿ & ಫ್ಯಾಮಿಲಿ, ನಾರಾಯಣ ಎಸ್. ಕೋಟ್ಯಾನ್ & ಫ್ಯಾಮಿಲಿ ಮಾಲೀಕತ್ವದ ಶಿವ್ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಹೆಜಮಾಡಿಯ ಟೋಲ್ ಗೇಟ್ ಸಮೀಪವಿರುವ ಶಿವ ಸಾಗರ ಕಾಂಪ್ಲೆಕ್ಸ್ ನಲ್ಲಿರುವ ಶುದ್ಧ ಸಸ್ಯಾಹಾರಿ ಊಟ, ಬಾರ್ & ರೆಸ್ಟೋರೆಂಟ್, ಲಾಡ್ಜಿಂಗ್ & ಬೋರ್ಡಿಂಗ್ ದ್ವಿತೀಯ ವರ್ಷದ ಸಂಭ್ರಮದಲ್ಲಿದೆ.
ಇಲ್ಲಿ ಎಸಿ ರೂಫ್ಟಾಪ್ ಗಾರ್ಡನ್ ಮಿನಿ ಹಾಲ್, ಎಸಿ ಡಿಲಕ್ಸ್ ರೂಮ್ಸ್, ಎಸಿ ಫ್ಯಾಮಿಲಿ ಬಾರ್ & ರೆಸ್ಟೋರೆಂಟ್, ಎಸಿ ಫ್ಯಾಮಿಲಿ ವೆಜ್ ರೆಸ್ಟೋರೆಂಟ್ ಜೊತೆಗೆ ಬೇಸ್ಮೆಂಟ್ ಪಾರ್ಕಿಂಗ್, ವೈ ಫೈ, ಏರ್ಪೋರ್ಟ್ ಮತ್ತು ರೈಲ್ವೇ ಸ್ಟೇಷನ್ ಪಿಕ್-ಅಪ್ & ಡ್ರಾಪ್ (ಬಾಡಿಗೆ ಆಧಾರದಲ್ಲಿ) ಸೌಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 7204651666, +91 7259219888, +917022950999
ಕಾಪು : ಗೋ ಮಾತೆ ಗೌರವ ದಿನ - ಅಭಿಯಾನಕ್ಕೆ ಚಾಲನೆ
Posted On: 27 Apr 2026, 12:16 PM
ಕಾಪು : ದೇಶದಾದ್ಯಂತ ನಡೆಯುತ್ತಿರುವ ಗೋ ಹತ್ಯೆ ನಿಷೇಧ ಹಾಗೂ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಎಂಬ ಹಿನ್ನೆಲೆಯಲ್ಲಿ ಎ.27, ಗೋ ಮಾತೆ ಗೌರವ ದಿನದಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಸುಧೀರ್ ಪೂಜಾರಿ ಸಾಮಿಲ್ ತೋಟ ಪಡು ಕಾಪುವಿನಲ್ಲಿ ಗೋಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಕರಾದ ಪ್ರಶಾಂತ್ ಪೂಜಾರಿ, ನಮ್ಮ ಕಾಪು ಚಾನೆಲ್ ಪ್ರವರ್ತಕರಾದ ವಿಕ್ಕಿ ಪೂಜಾರಿ ಮಡುಂಬು, ಸತೀಶ್ ದೇವಾಡಿಗ ಹಾಗೂ ಸುಧೀರ್ ಕುಟುಂಬಸ್ಥರು ಉಪಸ್ಥಿತರಿದ್ದರು.
ಪಡುಬಿದ್ರಿ : ಕಲಾಬೊಳ್ಳಿಲು ಯುವಕರ ತಂಡ ಸಂಯೋಜಿಸಿದ ನಾದ ವಿಘ್ನೇಶ್ವರ ಭಕ್ತಿಗೀತೆ ಬಿಡುಗಡೆ
Posted On: 26 Apr 2026, 09:52 AM
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪಡುಬಿದ್ರಿ ಕಲಾಬೊಳ್ಳಿಲು ಯುವಕರ ತಂಡ ಸಂಯೋಜಿಸಿದ ನಾದ ವಿಘ್ನೇಶ್ವರ ಶ್ರೀ ಕ್ಷೇತ್ರದ ಭಕ್ತಿಗೀತೆಯನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ. ವೈ.ಎನ್.ಶೆಟ್ಟಿ, ಪಿ.ಎಸ್. ನಟರಾಜ ರಾವ್ ಹಾಗೂ ಉದ್ಯಮಿ ಗಣೇಶ್ ಗುಜರಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುರೇಶ್,ಪ್ರಕಾಶ್, ಅಶೋಕ್ ಪಾದೆಬೆಟ್ಟು ಬಿಡುಗಡೆಗೊಳಿಸಿದರು.
ತಂಡ ಪ್ರಮುಖರಾದ ಅಕ್ಷಿತ್ ಪೂಜಾರಿ ಉಳ್ಳೂರು, ಲತೇಶ್ ಪಡುಬಿದ್ರಿ, ಶೈಲೇಶ್ ಆಚಾರ್ಯ ಮೈಲೊಟ್ಟು, ಅಭಿಲಾಷ್ ದೇವಾಡಿಗ ಪಡುಬಿದ್ರಿ, ಶ್ರೀರಾಜ್ ಆಚಾರ್ಯ, ವಿಕಾಸ್ ಆಚಾರ್ಯ, ನಿಶ್ಚಿತ್ ಪಾದೆಬೆಟ್ಟು,ಅಂಕಿತ್ ಪಾದೆಬೆಟ್ಟು,ಸೂರಜ್ ಪಾದೆಬೆಟ್ಟು, ರಂಜಿತ್ ಪಾದೆಬೆಟ್ಟು,ರಾಜೇಶ್ ಪಡುಬಿದ್ರಿ ಉಪಸ್ಥಿತರಿದ್ದರು.
