ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ISPRL ಪಾದೂರು ಘಟಕದಿಂದ : ಪ್ರಕೃತಿ ರಮಣೀಯವಾಗಿರುವ ಧನಸ್ಸು ತೀರ್ಥ ಸ್ವಚ್ಛತೆ

Posted On: 13-07-2025 05:30PM

ಕಾಪು : ಇನ್ನಂಜೆ ಗ್ರಾಮದ ಮಡುಂಬು ಧನಸ್ಸು ತೀರ್ಥ, ರೆಂಜಾಲ ಪಾದೆ ಇಲ್ಲಿ ISPRL ಪಾದೂರು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ ಉಪಸ್ಥಿತರಿದ್ದರು.

ಗ್ರಾಮಸ್ಥರ ಆಗ್ರಹ : ಧನಸ್ಸು ತೀರ್ಥ ಎಂಬುದು ಪವಿತ್ರ ತೀರ್ಥಬಾವಿಯನ್ನು ಹೊಂದಿದ್ದು, ಕುಂಜಾರು ಗಿರಿಯಿಂದ ಗುರುತಿಸಲ್ಪಡುವ ನಾಲ್ಕು ತೀರ್ಥಗಗಳಲ್ಲಿ ಇದೂ ಒಂದು, ಕಾಪು ರಾಷ್ಟ್ರೀಯ ಹೆದ್ದಾರಿಯಿಂದ 3 ಕಿಲೋಮೀಟರ್ ಅಂತರದಲ್ಲಿ ಇದ್ದು, ಶಂಕರಪುರ ಅಥವಾ ಬಂಟಕಲ್ಲಿಗೂ 3 ಕಿಲೋಮೀಟರ್ ಅಂತರದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ಆಕರ್ಷಿಸಿ ಕೈ ಬೀಸಿ ತನ್ನತ್ತ ಕರೆಯುತ್ತಿದೆ, ಪ್ರವಾಸೋದ್ಯಮಕ್ಕೆ ಕೊಡುಗೆಯನ್ನು ನೀಡಬಲ್ಲ ಈ ಧನಸ್ಸು ತೀರ್ಥಕ್ಕೆ ಸಾಗಬೇಕಾದರೆ ಮಣ್ಣಿನ ರಸ್ತೆಯಲ್ಲೇ ಸಾಗಬೇಕಾಗಿರುವುದು ದುರದೃಷ್ಟಕರ ಸಂಗತಿ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ, ಸೂಕ್ತ ರಸ್ತೆಯ ವ್ಯವಸ್ಥೆಯನ್ನು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.