ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನೋವಲ್ ಕೊರೊನ ವೈರಸ್ ತಡೆಗಟ್ಟಲು ಜನಜಾಗೃತಿ

Posted On: 29-03-2020 01:22PM

ಧ್ವನಿ ಬೆಳಕು ಸಂಯೋಜಕರ ಸಂಘಟನೆ(ರಿ.) ಉಡುಪಿ ಜಿಲ್ಲೆ, ಕಾಪು ವಲಯ, ಉಡುಪಿ ಜಿಲ್ಲಾಡಳಿತ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನೋವಲ್ ಕೊರೋನಾ ವೈರಸ್ ಹರಡದಂತೆ ಜನಜಾಗೃತಿ ಕಾರ್ಯಕ್ರಮ. ಇವತ್ತು ಅಣ್ಣಪ್ಪ ಸೌಂಡ್ಸ್ ಶಂಕರಪುರದ ಶೇಖರ್ ಎನ್ ಬಂಗೇರ ಮತ್ತು ಅನಿಲ್ ಸೌಂಡ್ಸ್ ನ ಅನಿಲ್ ಡೇಸಾ ಇವರು ತಮ್ಮ ವಾಹನದಲ್ಲಿ ಕೊರೋನಾ ಬಗ್ಗೆ ಜನಜಾಗೃತಿ ಮೂಡಿಸಲು ತಮ್ಮ ವಾಹನದಲ್ಲಿ ಹೊರಟ್ಟಿದ್ದಾರೆ. ನಿಮ್ಮ ಈ ಉತ್ತಮ ಸೇವೆಯಿಂದ ಜನರು ಇನ್ನಷ್ಟು ಜಾಗ್ರತರಾಗಲಿ ಎಂಬುದೇ ನಮ್ಮ ಆಶಯ.. ಮಾಹಿತಿ : ಮಾಲಿನಿ ಶೆಟ್ಟಿ ಇನ್ನಂಜೆ