Updated News From Kaup

ಕರ್ನಾಟಕ ಯುವರತ್ನ ಪ್ರಶಸ್ತಿಗೆ ಭಾಜನರಾದ ರಾಕೇಶ್ ಕುಂಜೂರು

Thumbnail
Posted On: 05 Mar 2020, 04:59 PM

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯ ಜಂಗಮ ಮಠದಲ್ಲಿ ನಡೆದ 11 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ ಪ್ರಶಸ್ತಿಗೆ ಭಾಜನರಾದ ಜೇಸಿಐ ಪೂರ್ವ ವಲಯಾಧ್ಯಕ್ಷ, ರಾಷ್ಟ್ರೀಯ ಸಂಯೋಜಕ, ಸಾಮಾಜಿಕ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಪ್ರತಿನಿಧಿಯಾಗಿರುವ, ಉದಯವಾಣಿ ಕಾಪು ವರದಿಗಾರ ರಾಕೇಶ್ ಕುಂಜೂರು. ಅಭಿನಂದನೆಗಳು ನಮ್ಮ ಕಾಪು

ಕಾಪು ತಾಲೂಕಿನ ಇನ್ನಂಜೆಯಲ್ಲಿ ಬಾಳೆಹಣ್ಣಿಗೊಲಿಯುವ ಮಡುಂಬು ಮಹಾಗಣಪತಿ ಉತ್ಸವ

Thumbnail
Posted On: 05 Mar 2020, 04:59 PM

ಮಡುಂಬು ಶ್ರೀ ಮಹಾಗಣಪತಿ ದೇವರ ಸನ್ನಿದಿಯಲ್ಲಿ ವರ್ಷಂಪ್ರತಿ ಜರಗುವ ಮಹೋತ್ಸವವು ಯಥಾನುಕ್ರಮದಲ್ಲಿ ತಾರೀಕು 09/02/2020 ರವಿವಾರ ಜರಗಲಿರುವುದು. ಈ ಶುಭ ಸಮಯದಲ್ಲಿ ವರ್ಷಂಪ್ರತಿ ಜರಗುವಂತೆ 108 ನಾಳಿಕೇರ ಗಣಯಾಗ ಪೂರ್ವಾಹ್ನ ಗಂಟೆ 9 ಕ್ಕೆ ಪೂರ್ಣಾಹುತಿ ಮತ್ತು ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ, ಉತ್ಸವ ಬಲಿ ನಂತರ ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5 ರಿಂದ ಶ್ರೀ ಧೂಮಾವತಿ ಭಜನಾ ಮಂಡಳಿ ಕಲ್ಯಾಲು ಮತ್ತು ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ ಗಂಟೆ 7ಕ್ಕೆ ಉತ್ಸವ ಬಲಿ, 9:30 ಕ್ಕೆ ದೊಡ್ಡ ರಂಗಪೂಜೆ ನಡೆಯಲಿರುವದು ಮತ್ತು ತಾರೀಕು 10/02/2020 ರ ಸೋಮವಾರ ಸಾಯಂಕಾಲ ಗಂಟೆ 6 ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ತಾರೀಕು 11/02/2020 ರಂದು ಬೆಳಿಗ್ಗೆ ಚಂಡಿಕಾಹೋಮ, ಸಂಜೆ ಗಂಟೆ 6ಕ್ಕೆ ರಕ್ತೇಶ್ವರಿ ಹೂವಿನ ಪೂಜೆ. ಆ ಪ್ರಯುಕ್ತ ಶ್ರೀ ದೇವರ ಸನ್ನಿದಿಯಲ್ಲಿ ನಡೆಯುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ ನಮ್ಮ ಕಾಪು Read More..

ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಕೊತಲಕಟ್ಟೆಯಲ್ಲಿ ವಾರ್ಷಿಕ ನೇಮೋತ್ಸವ

Thumbnail
Posted On: 05 Mar 2020, 04:59 PM

ವಾರ್ಷಿಕ ನೇಮೋತ್ಸವದ ಪ್ರಯುಕ್ತ ತಾರೀಕು 21/02/2020 ರಂದು ಭೂತರಾಜ ಬನದಲ್ಲಿ ವಿಶೇಷ ಆಶ್ಲೇಷ ಬಲಿ ಮತ್ತು ಅನ್ನಸಂತರ್ಪಣೆ, ತಾರೀಕು 22/02/2020 ರಂದು ಬಬ್ಬುಸ್ವಾಮಿ ಮತ್ತು ತನ್ನಿ ಮಾನಿಗ, ಹಾಗೂ 23/02/2020 ರಂದು ಜುಮಾದಿ ಬಂಟ, ಗುಳಿಗ ಮತ್ತು ಕೊರಗ ತನಿಯ ದೈವದ ವಾರ್ಷಿಕ ನೇಮೋತ್ಸವ ಜರಗಲಿರುವುದು.. ಈ ಎಲ್ಲಾ ಕಾರ್ಯಕ್ರಮಕ್ಕೆ ಶುಭಕೋರುವವರು : ನಮ್ಮ ಕಾಪು

ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ

Thumbnail
Posted On: 05 Mar 2020, 04:59 PM

ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿದಿಯಲ್ಲಿ ವೇದಮೂರ್ತಿ ಶ್ರೀ ಪಾದೂರು ಲಕ್ಷ್ಮಿ ನಾರಾಯಣ ತಂತ್ರಿಯವರ ನೇತೃತ್ವದಲ್ಲಿ ವರ್ಷವಾಧಿ ಮಹೋತ್ಸವವು ತಾರೀಕು 21-02-2019 ರಂದು ಮೊದಲ್ಗೊಂಡು ತಾರೀಕು 25/02/2019 ರಂದು ಸಂಪನ್ನಗೊಳ್ಳಲಿದೆ ತಾರೀಕು 22/02/2019 ರಂದು ರಾತ್ರಿ 09:30 ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ "ಪಿರ ಪೋಂಡುಗೆ" ಸರ್ವರಿಗೂ ಆದರದ ಸ್ವಾಗತ ಬಯಸುವ : ನಮ್ಮ ಕಾಪು

ಶಿರ್ವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಥೊತ್ಸವ ಮತ್ತು ಬ್ರಹ್ಮಮಂಡಲೋತ್ಸವ

Thumbnail
Posted On: 05 Mar 2020, 04:59 PM

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾಣಿಬೆಟ್ಟು ಶಿರ್ವ ಇಲ್ಲಿಯ ಅಷ್ಟಬಂಧ-ಸಾನಿಧ್ಯ ಕಲಶ,ಶ್ರೀ ಮನ್ಮಹಾರಥೋತ್ಸವ,ಶ್ರೀ ಬ್ರಹ್ಮಮಂಡಲೋತ್ಸವ - ಮಹಾ ಸಂತರ್ಪಣೆ ಕಾರ್ಯಕ್ರಮವು ದಿನಾಂಕ 06/02/2020 ರಿಂದ ಆರಂಭಗೊಂಡು 12/02/2020 ಪರ್ಯಂತ ನಡೆಯಲಿದೆ... ಎಲ್ಲಾ ಕಾರ್ಯಕ್ರಮಗಳಿಗೆ ತಮಗಿದೋ ಅತ್ಮೀಯ ಸ್ವಾಗತ.. ನಮ್ಮ ಕಾಪು

ಶಿರ್ವ ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

Thumbnail
Posted On: 05 Mar 2020, 04:59 PM

ಕೋಡು ಪಂಜಿಮಾರು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ತುಳು ಹಾಸ್ಯಮಯ ನಾಟಕವು ದಿನಾಂಕ 8/02/2020 ರ ಶನಿವಾರ ರಾತ್ರಿ 10-30 ಕ್ಕೆ ಶ್ರೀ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ... ಕಲಾಭಿಮಾನಿಗಳಿಗೆ ಅತ್ಮೀಯ ಅಕ್ಕರೆಯ ಆಮಂತ್ರಣ.... ನಮ್ಮ ಕಾಪು

ತಂದೆ ತಾಯಿಗೆ ಸಮಾನವಾದ ದೇವರಿಲ್ಲ

Thumbnail
Posted On: 05 Mar 2020, 04:59 PM

71 ನೇ ಗಣರಾಜ್ಯೋತ್ಸವದ ಅಂಗವಾಗಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ತಾರೀಕು 03/02/2020 ರಂದು 15 ಕುರ್ಚಿಯನ್ನು ಅಪ್ಪ ಅಮ್ಮ ಅನಾಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು.. ಈ ಸಂದರ್ಭದಲ್ಲಿ ಅಪ್ಪ ಅಮ್ಮ ಅನಾಥಾಲಯ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಪೂಜಾರಿ ಕೂರಾಡಿ ಇವರು ಬಿರುವೆರ್ ಕಾಪು ಸೇವಾ ಟ್ರಸ್ಟ್ನ ಸಾಮಾಜಿಕ ಕಾರ್ಯಗಳಿಗೆ ಪ್ರಸಂಶೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಶಿರ್ವ ಇದರ ಕಾರ್ಯದರ್ಶಿ ಸುಜನ್ ಎಲ್ ಸುವರ್ಣ ಕುತ್ಯಾರು ಇವರು ಮಕ್ಕಳಿಂದ ಹಾಗೂ ಇನ್ನಿತರ ಕಾರಣದಿಂದ ತಿರಸ್ಕರಿಸಲ್ಪಟ್ಟ ಹಕ್ಕು ವಂಚಿತ ತಂದೆ ತಾಯಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ನೀವು ನೀಡುತ್ತಿರುವ ಸೇವೆ ಅವಿಸ್ಮರಣೀಯ ಎಂದು ಸಂಸ್ಥೆಗೆ ಶುಭ ಹಾರೈಸಿದರು, ಅತಿಥ್ ಸುವರ್ಣ ಪಾಲಮೆ, ಮನೋಹರ್ ಕಲ್ಲುಗುಡ್ಡೆ, ಅನಿಲ್ ಅಮಿನ್ ಕಾಪು, ಕಾರ್ತಿಕ್ ಅಮಿನ್ ಕಲ್ಲುಗುಡ್ಡೆ ಮತ್ತು ವಿಕ್ಕಿ ಪೂಜಾರಿ ಮಡುಂಬು ಉಪಸ್ಥಿತರಿದ್ದರು.. ನಮ್ಮ ಕಾಪು

ಕುತ್ಯಾರು ಕುಲಾಲ ಯುವ ವೇದಿಕೆಯ ವರ್ಷದ ಸಂಭ್ರಮ

Thumbnail
Posted On: 05 Mar 2020, 04:59 PM

ಕಾಪು:ಕುಲಾಲ ಯುವ ವೇದಿಕೆ ಕುತ್ಯಾರು ಇದರ ಪ್ರಥಮ ವಾರ್ಷಿಕೋತ್ಸವದ ಸುದಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಗ್ರಾಮ ಗೌರವ,ವಿದ್ಯಾನಿಧಿ ವಿತರಣೆ,ಶ್ರೀ ದೇವರ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮವು ದಿನಾಂಕ 09/02/2020 ರವಿವಾರ ಕುತ್ಯಾರಿನ ರಾಮೊಟ್ಟು ಬನತೋಡಿ ಗದ್ದೆಯಲ್ಲಿ ನಡೆಯಲಿದೆ.... ಸರ್ವರಿಗೂ ಹಾರ್ದಿಕ ಸ್ವಾಗತ ಬಯಸುವ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕುಲಾಲ ಯುವ ವೇದಿಕೆ ಕುತ್ಯಾರು..

Foundation Reviews Swachhagraha Project

Thumbnail
Posted On: 05 Mar 2020, 04:59 PM

Adani Foundation had implemented Swachhagraha project', a movement to create culture of cleanlines in 61 schools in the district from November 2018 to October 2019. Review meeting of the same and award ceremony for best schools and best students was held at Udupi Power Plant premises at Yellur village on Saturday. Kaup MLA Lalaji R Mendon and Kishore Alva, president and executive director of Adani UPCL lighted the lamp.

Mahamaya Foundation & Manipal Foundation

Thumbnail
Posted On: 05 Mar 2020, 04:59 PM

Mahamaya and Manipal Foundation has installed Virtual Class in S.V.H High School Innanje. Its free of cost and it was installed on 26 November 2019. The Mahamaya foundation believes that an educated society is a healthy society.Read More..