ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದಿಂದ ಆಷಾಢ ಸಂಭ್ರಮ
Thumbnail
ಕಾಪು : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗದ ವತಿಯಿಂದ ಶಿರ್ವದಲ್ಲಿ ಆಷಾಢ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಶಿರ್ವ ರಾಘವೇಂದ್ರ ಆಚಾರ್ಯ ದಂಪತಿಗಳು ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ವಾಸು ಆಚಾರ್ಯ ಪರ್ಕಳ ಹಿಂದಿನ ಕಾಲದಲ್ಲಿ ಆಷಾಢ ಮಾಸ ಸಂದರ್ಭದಲ್ಲಿ ಮನೆಯ ಪರಿಸರದಲ್ಲಿ ಬೆಳೆದ ಹಸಿರು ತರಕಾರಿಗಳು ವಿವಿಧ ತರದ ಗೆಡ್ಡೆಗಳು, ಮಳೆಗಾಲಕ್ಕಾಗಿ ಕಾಯ್ದಿರಿಸಿದ ವಿವಿಧ ತಿಂಡಿಗಳನ್ನು ಮಾಡುವ ಕಾಲ ಇತ್ತು. ಇದನ್ನು ಪರಿಚಯಿಸಿದ ಈ ಕಾರ್ಯಕ್ರಮ ಇಂದಿನ ಯುವಕರಿಗೆ ಮಾದರಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಿರ್ವ ಸೊರ್ಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಿಳಾ ಬಳಗದ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಹರೀಶ್ ಆಚಾರ್ಯ ಶುಭ ಹಾರೈಸಿದರು. ಅದೃಷ್ಟಶಾಲಿಗಳನ್ನು ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು. ಆಷಾಢ ಮಾಸದ ಸುಮಾರು 28ಬಗೆಯ ವಿವಿಧ ಖಾದ್ಯಗಳನ್ನು ಮಹಿಳಾ ಬಳಗದ ಸದಸ್ಯರು ತಯಾರಿಸಿ ಉಣಬಡಿಸಿದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾದರು. ಯುವ ಸಂಗಮದ ಗೌರವಾಧ್ಯಕ್ಷ ಸುರೇಶ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ಕಾರ್ಯದರ್ಶಿ ಪ್ರೀತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಮಾಧವ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೀತಮ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಆಚಾರ್ಯ ವಂದಿಸಿದರು.
Additional image Additional image Additional image
02 Aug 2021, 02:41 PM
Category: Kaup
Tags: