ಸೈಬ್ರಕಟ್ಟೆ : ರೋಟರಿ ಸಮುದಾಯ ದಳಗಳ ಪದಪ್ರದಾನ ಕಾರ್ಯಕ್ರಮ
Thumbnail
ಉಡುಪಿ : ಸೈಬ್ರಕಟ್ಟೆ ರೋಟರಿಯ ಅಂಗಸಂಸ್ಥೆ ರೋಟರಿ ಸಮುದಾಯ ದಳಗಳ ಪದಪ್ರದಾನ ಕಾರ್ಯಕ್ರಮ ರೋಟರಿ ಭವನದಲ್ಲಿ ನಡೆಯಿತು. ಸೈಬ್ರಕಟ್ಟೆ ಯಡ್ತಾಡಿ ಭಾಗದ ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅವರಿಗೆ ಕೊರಳ ಲಾಂಛನ ತೊಡಿಸಿ ರೋಟರಿ 3182 ಜಿಲ್ಲಾ ಉಪಸಭಾಪತಿ ಜಗನ್ನಾಥ್ ಕೋಟೆ ಪದಪ್ರದಾನ ಗೈದರು. ಕಾರ್ಯದರ್ಶಿಯಾಗಿ ರಾಘವೇಂದ್ರ ಶೆಟ್ಟಿ ಕಲ್ಬೆಟ್ಟು ಆಯ್ಕೆಯಾದರು. ಈ ಸಂದರ್ಭ ಮಾತನಾಡಿದ ರೋಟರಿ 3182 ಜಿಲ್ಲಾ ಉಪಸಭಾಪತಿ ಜಗನ್ನಾಥ್ ಕೋಟೆ ಯವರು ರೋಟರಿ ಸಮುದಾಯ ದಳ ಅನ್ನೋದು 18 ವರ್ಷ ಮೇಲ್ಪಟ್ಟ ವರು ಸದಸ್ಯರಾಗಬಹುದು, ಸಮುದಾಯದಲ್ಲಿ ರೋಟರಿ ಜೊತೆ ಗೂಡಿ ಹಲವು ಸೇವಾ ಕಾರ್ಯಕ್ರಮ ಹಮ್ಮಿಕೊಂಡು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿ ಅಂತ ಸಂದೇಶ ನೀಡಿದರು. ಹಾಗೆಯೇ ಸೈಬ್ರಕಟ್ಟೆ ಶಿರಿಯಾರ ಭಾಗದ ರೋಟರಿ ಸಮುದಾಯ ದಳವನ್ನು ವಲಯ ಸಂಯೋಜಕರಾದ ಶಂಕರ್ ಸುವರ್ಣ ಅವರು ಅಧ್ಯಕ್ಷ ಶರತ್ ಕೆ ಅವರಿಗೆ ಕೊರಳ ಲಾಂಛನ ತೊಡಿಸಿ ಪದಪ್ರದಾನ ನೆರವೇರಿಸಿದರು ಕಾರ್ಯದರ್ಶಿಯಾಗಿ ಶರತ್ ಡಿ ಆಯ್ಕೆ ಗೊಂಡರು, ಅಲ್ಲದೆ ಸಮುದಾಯ ದಳಗಳ ಕಾರ್ಯ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸೈಬ್ರಕಟ್ಟೆ ರೋಟರಿ ಕ್ಲಬ್ ನ ಇಂಜಿನಿಯರ್ ಸದಸ್ಯರು ಗಳಾದ ಸಂದೀಪ್ ಶೆಟ್ಟಿ ಥೋಮಸ್ ವಾಝ್ ,ರತ್ನಾಕರ್ ಹೆಗ್ಡೆ ವಿಜಯ್ ಕುಮಾರ್ ಶೆಟ್ಟಿ ಕೆ.ಯು ಪ್ರಸಾದ್ ಭಟ್ ಇವರನ್ನು ಇಂಜಿನಿಯರ್ ಡೇ ಆಚರಣೆಯನ್ನು RCC ಮತ್ತು ರೋಟರಿ ಜಂಟಿಯಾಗಿ ಆಯೋಜಿಸಿ ಮುಖ್ಯ ಅತಿಥಿ ರೋಟರಿ ವಲಯ 3 ರ ಸಹಾಯಕ ಗವರ್ನರ್ ಕೆ ಪದ್ಮನಾಭ್ ಕಾಂಚನ್ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿ ಎಂಜಿನಿಯರ್ಗಳು ಉತ್ತಮ ಟೆಕ್ನಾಲಜಿ ಮೂಲಕ ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯ ನವರ ಮಹಾನ್ ಸಾಧನೆಯ ನೆನಪಿಗಾಗಿ ಅವರು ಹುಟ್ಟಿದ ದಿನವನ್ನು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ ಯಡ್ತಾಡಿ ಪಂಚಾಯತ್ ಸದಸ್ಯ ಅಮೃತ ಪೂಜಾರಿ ,ರೋಟರಿ ಕಾರ್ಯದರ್ಶಿ ಅಣ್ಣಯ್ಯದಾಸ್, ವರದರಾಜ್ ಶೆಟ್ಟಿ, ರೋಟರಿ ಸದಸ್ಯರು ಭಾಗಿಯಾಗಿದ್ದರು.
19 Sep 2021, 08:11 PM
Category: Kaup
Tags: