ಕೃಷಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಕಾಯಕಲ್ಪ ನಿಟ್ಟಿನಲ್ಲಿ ಜನತಾ ಜಲಧಾರೆ ರಥ ಯಾತ್ರೆ ಉಡುಪಿಗೆ : ಯೋಗೀಶ ವಿ ಶೆಟ್ಟಿ
Thumbnail
ಉಡುಪಿ : ರಾಜ್ಯದ ನೆಲ-ಜಲದ ಚಿಂತನೆಯೊಂದಿಗೆ ಕುಡಿಯುವ ನೀರು, ನೀರಾವರಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ರಾಜ್ಯದ ಹಾಗೂ ಉಡುಪಿ ಜಿಲ್ಲೆಯಲ್ಲಿ ನೆನೆಗುಂದಿಗೆ ಬಿದ್ದ ನೀರಾವರಿ ಯೋಜನೆಗಳು ಮತ್ತು ನದಿ ನೀರು ಪಶ್ಚಿಮಕ್ಕೆ ಹರಿದು ಸಮುದ್ರಕ್ಕೆ ಸೇರುವುದನ್ನು ತಡೆದು ಕೃಷಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ನಮ್ಮ ಸರಕಾರದ ಮುಂದಿನ ಕಾಳಜಿ ಇದೆ. ಹಿಂದೆಯೂ ನಮ್ಮ ಸರಕಾರ ನೀರಾವರಿ ವ್ಯವಸ್ಥೆಯನ್ನು ನಮ್ಮ ನಾಯಕರು ಮಾಡಿದ್ದಾರೆ ಇದರ ಅಂಗವಾಗಿ ಜನರು ಪಕ್ಷಾತೀತವಾಗಿ ಬೆಂಬಲ ಕೋರುವಂತೆ ನಾಯಕರಿಗೆ, ಕಾರ್ಯಕರ್ತರಿಗೆ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ ವಿ ಶೆಟ್ಟಿ ಕರೆ ನೀಡಿದರು. ಅವರು ಏಪ್ರಿಲ್ 4 ರಂದು ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಜಲವಿವಾದ ಸುಳಿಯಲ್ಲಿ ಸಿಕ್ಕಿ ರಾಜ್ಯಕ್ಕೆ ಅನ್ಯಾಯವಾಗಿದೆ, ಮತ್ತು ಕೆಲವೊಂದು ಜಲವಿವಾದಗಳು ಸುಪ್ರೀಂ ಕೋರ್ಟಿನಲ್ಲಿ ನೆರೆ ರಾಜ್ಯಗಳ ತಕರಾರಿನಿಂದ ನೆನೆಗುದಿಗೆ ಬಿದ್ದಿದೆ. ವ್ಯವಸಾಯಕ್ಕೆ ನೀರುಣಿಸಲು ನಿರ್ಮಿಸಿರುವ ಕಾಲುವೆಗಳು ಮತ್ತು ವಿತರಣಾ ನಾಲೆಗಳನ್ನು ಪುನಶ್ಚೇತನ ಆಧುನೀಕರಣ ಗೊಳಿಸದೆ ರೈತರಿಗೆ ಸದುಪಯೋಗ ಪಡೆಯಲು ಆಗುತ್ತಿಲ್ಲ. ಈ ಯೋಜನೆ ಗಳಿಗೆ ಕಾಯಕಲ್ಪ ಕಲ್ಪಿಸಿ ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡಿ, ಕರ್ನಾಟಕ ಜನತೆಗೆ ಜಲ ಶಾಮಲ, ಸಸ್ಯಶಾಮಲ ವಾಗಿಸಲು ಜನತಾದಳ ಕಟಿಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಕುಡಿಯುವ ನೀರು ಮತ್ತು ರೈತರ ಜಮೀನುಗಳಿಗೆ ನೀರುಣಿಸಲು ಜನತಾದಳ ಪಕ್ಷದ ವತಿಯಿಂದ ಕಾಯಕಲ್ಪ ಮಾಡಲಾಗುವುದು. ಕನ್ನಡನಾಡಿನ ಜಲಸಂಪನ್ಮೂಲ ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆಧ್ಯಾರ್ಪಣೆ, ಇದು ಪಕ್ಷದ ದೃಢಸಂಕಲ್ಪ. ನಮ್ಮ ಜಿಲ್ಲೆಗೆ ಜಲಧಾರೆ ಯಾತ್ರೆಯ ವಾಹನವು ಎಪ್ರಿಲ್ ತಿಂಗಳಲ್ಲಿ ಆಗಮಿಸಲಿದ್ದು, ಕಲಶಕ್ಕೆ ವಾರಾಹಿ,ಸೌಪರ್ಣಿಕಾ ನದಿ, ಸೀತಾನದಿ, ಶಾಂಭವಿ ನದಿ, ನೇತ್ರಾವತಿ ನದಿಯ ನೀರನ್ನು ಶೇಖರಿಸಿ, ಬೆಂಗಳೂರು ತಲುಪಿ, ರಾಜ್ಯದ ಇತರ ಕಡೆಗಳಿಂದ ಆಗಮಿಸುವ ಜಲಧಾರೆಯ ಕಲಶ ದೊಂದಿಗೆ ಅರಮನೆ ಮೈದಾನದಲ್ಲಿ ಬೃಹತ್ ಸಭೆ ಜರಗಿದ ನಂತರ, ಜೆಪಿ ಭವನದ ರಾಜ್ಯ ಪಕ್ಷ ಕಚೇರಿಯಲ್ಲಿ ವರ್ಷಪೂರ್ತಿ ಕಲಶಕ್ಕೆ ಪೂಜೆಗಳು ನಡೆಯಲಿದ್ದು, ಜಲಯಾತ್ರೆಯ ಕಾರ್ಯಕ್ರಮಕ್ಕೆ ಸರ್ವರ ಸಹಕಾರವನ್ನು ಕೋರಿದರು. ಈ ಸಂದರ್ಭ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀ ವಾಸುದೇವರಾವ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಕಾಂತ ಅಡಿಗರು, ಸಂದರ್ಭೋಚಿತವಾಗಿ ಮಾತನಾಡಿದರು. ಸಭೆಯಲ್ಲಿ ರಾಜ್ಯ ಪದಾಧಿಕಾರಿಯಾದ ಗಂಗಾಧರ ಬಿರ್ತಿ, ಜಿಲ್ಲಾ ಪದಾಧಿಕಾರಿಗಳು,ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ, ಸಂದೇಶ್ ಭಟ್, ಶ್ರೀಕಾಂತ ಹೆಬ್ರಿ, ಬಾಲಕೃಷ್ಣ ಆಚಾರ್ಯ, ಮತ್ತು ಜಿಲ್ಲಾ ಯುವ ಅಧ್ಯಕ್ಷ ಸಂಜಯ ಕುಮಾರ್,ಮತ್ತು ಉದಯ ಆರ್ ಶೆಟ್ಟಿ, ರಮೇಶ್ ಕುಂದಾಪುರ, ವೆಂಕಟೇಶ್ ಎಂ ಟಿ, ಎಸ್. ಪಿ.ಬರ್ಬೊಸ, ಆರ್. ಎನ್.ಕೋಟ್ಯಾನ್, ದೇವರಾಜ ತೊಟ್ಟಮ್, ರಾಮರಾವ್, ಬಾಲಚಂದ್ರ ದೇವಾಡಿಗ, ಭರತ್ ಕುಮಾರ್ ಶೆಟ್ಟಿ, ಮಹೇಶ್ ಪರ್ಕಳ, ಸಂಪತ್, ವಿಶಾಲ್, ಆದಿತ್ಯ ಕುಮಾರ್, ಉದಯಕುಮಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ರವರ ಸ್ವಾಗತಿಸಿ , ಜಿಲ್ಲಾ ಮಹಿಳಾ ಕಾರ್ಯಾಧ್ಯಕ್ಷರಾದ ಪೂರ್ಣಿಮಾ ಎಸ್ ನಾಯಕ್ ವಂದಿಸಿದರು.
05 Apr 2022, 06:44 PM
Category: Kaup
Tags: