ಕಾಪು : ಏಪ್ರಿಲ್ 18 ಆದಿತ್ಯವಾರದಂದು ಕಾಪು ಸಮೀಪದ ಕುಂಜ, ಕಲ್ಲುಗುಡ್ಡೆಯ ಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠ ವರ್ಧಂತಿ ,
ನಾಗಬ್ರಹ್ಮ ಹಾಗೂ ಸಪರಿವಾರ ಶಕ್ತಿಗಳಿಗೆ ತನುತಂಬಿಲಾದಿ ಸೇವೆಗಳು , ಭಜನಾ ಮಂಗಳೋತ್ಸವವು ನೆರವೇರಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಜರುಗಲಿದೆ.
ಈ ಎಲ್ಲಾ ದೇವತಾ ಕಾರ್ಯಗಳು ಸರಕಾರದ ಕೋವಿಡ್ ನಿಯಂತ್ರಣ ನಿಬಂಧನೆಗೊಳಪಟ್ಟು ಆಯೋಜಿಸಲಾಗಿದೆ. ಆದ್ದರಿಂದ ಭಕ್ತಾಧಿಗಳ ಸ್ವಯಂ ಸುರಕ್ಷತೆ ಹಾಗೂ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.