ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಿಲ್ಲವ ಸೇವಾ ಸಂಘ ಇನ್ನಂಜೆ : ಗುರು ಮಂದಿರದ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ

Posted On: 29-04-2021 10:42PM

ಕಾಪು : ಬಿಲ್ಲವ ಸೇವಾ ಸಂಘ (ರಿ.) ಇನ್ನಂಜೆಯ ನಾರಾಯಣಗುರು ಮಂದಿರದ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವವು ಸರ್ಕಾರದ ನಿರ್ದೇಶನದಂತೆ‌ ಕೋವಿಡ್ ನಿರ್ಬಂಧದಂತೆ ಸರಳ‌‌ ರೀತಿಯಲ್ಲಿ ಆಚರಿಸಲಾಯಿತು.

ಆ ಪ್ರಯುಕ್ತ ಏಪ್ರಿಲ್ 29, ಶುಕ್ರವಾರ ಬೆಳಿಗ್ಗೆ 7.00 ಗಂಟೆಗೆ ಮಹಾಗಣಪತಿ ಹೋಮ, ನವಕ ಪ್ರಧಾನ ಕಲಶ, 8.00 ಗಂಟೆಗೆ ಸಾಮೂಹಿಕ ಗುರುಪೂಜೆ ಜರಗಿತು. ನಂತರ ಭಜನಾ ಮಂಗಳ ಹಾಗೂ ಪ್ರಸಾದ ವಿತರಣೆ ನಡೆಯಿತು.