ಕಾಪು : ಬಿಲ್ಲವ ಸೇವಾ ಸಂಘ (ರಿ.) ಇನ್ನಂಜೆಯ ನಾರಾಯಣಗುರು ಮಂದಿರದ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವವು ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿರ್ಬಂಧದಂತೆ ಸರಳ ರೀತಿಯಲ್ಲಿ ಆಚರಿಸಲಾಯಿತು.
ಆ ಪ್ರಯುಕ್ತ ಏಪ್ರಿಲ್ 29, ಶುಕ್ರವಾರ ಬೆಳಿಗ್ಗೆ 7.00 ಗಂಟೆಗೆ ಮಹಾಗಣಪತಿ ಹೋಮ, ನವಕ ಪ್ರಧಾನ ಕಲಶ, 8.00 ಗಂಟೆಗೆ ಸಾಮೂಹಿಕ ಗುರುಪೂಜೆ ಜರಗಿತು. ನಂತರ ಭಜನಾ ಮಂಗಳ ಹಾಗೂ ಪ್ರಸಾದ ವಿತರಣೆ ನಡೆಯಿತು.