ಕಾಪು : ಕಾಪು ತಾಲೂಕಿನ ಕರಂದಾಡಿ ಗ್ರಾಮದ ಬ್ರಹ್ಮರಗುಂಡಿ ಹೊಳೆಯು ಪವಿತ್ರವಾಗಿದ್ದು, ಇಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಳಕದ ಸ್ಥಳವಾಗಿರುತ್ತದೆ. ಈ ಪವಿತ್ರ ಸ್ಥಳದಲ್ಲಿ ಯಾವುದೇ ತರಹದ ತ್ಯಾಜ್ಯ ಮತ್ತು ಕಸ ಕಡ್ಡಿ ಹಾಕಬಾರದೆಂದು ವಿನಂತಿಸುವ ಬ್ಯಾನರ್ ಅಳವಡಿಸಲಾಗಿದೆ.
ಜನರು ಪ್ಲಾಸ್ಟಿಕ್, ಕೋಳಿ ತ್ಯಾಜಗಳನ್ನು ಎಸೆಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆ ಮೂಲಕ ಹೊಳೆಯ ಪಾವಿತ್ರ್ಯತೆಯನ್ನು ಉಳಿಸಬೇಕಾಗಿದೆ ಎಂದಿದ್ದಾರೆ.