ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಲಾಕ್ಡೌನ್ ಸಮಯ ನಮ್ಮನೆ ಕೈತೋಟ ವಾಟ್ಸಾಪ್ ಗ್ರೂಪ್ ಮೂಲಕ ತರಕಾರಿ, ಹೂ, ಹಣ್ಣು, ಆಯುರ್ವೇದೀಯ ಗಿಡಗಳ ಮಾಹಿತಿ ವಿನಿಮಯ

Posted On: 16-05-2021 12:39PM

ಕಾಪು : ಮೊದಲ ಲಾಕ್ಡೌನ್ ಅವಧಿಯಲ್ಲಿ ಸುಮಾರು 700 ಕ್ಕೂ ಅಧಿಕ ಮಕ್ಕಳಿಗೆ ವಾಟ್ಸಾಪ್ ಮೂಲಕ ಕರಕುಶಲ ಕಲೆ, ಮ್ಯಾಜಿಕ್, ಹಾಡು, ನೃತ್ಯ, ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿದ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿ ತಂಡವು ಇದೀಗ ಹೊಸ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಲಾಕ್ಡೌನ್ ಎರಡನೇ ಅವಧಿಯಲ್ಲಿ ನಮ್ಮನೆ ಕೈತೋಟ ಎಂಬ ವಾಟ್ಸಾಪ್ ಗ್ರೂಪ್‌ನ ಮೂಲಕ ಮನೆಯಲ್ಲಿಯೇ ತರಕಾರಿ, ಹೂ, ಹಣ್ಣು, ಆಯುರ್ವೇದೀಯ ಗಿಡಗಳ ಬಗೆಗೆ ಮಾಹಿತಿ ವಿನಿಮಯದ ಗುಂಪೊಂದನ್ನು ರಚಿಸಿ ಆ ಮೂಲಕ ಒಂದಷ್ಟು ಪರಿಸರದ ಬಗೆಗೆ ಜನರಲ್ಲಿ ಚಿಂತನೆಯನ್ನು ಮೂಡಿಸುತ್ತಿದೆ. ಈ ಗುಂಪಿನಲ್ಲಿ ರಾಜ್ಯದ ಸುಮಾರು 250 ಕೃಷಿ ಆಸಕ್ತರು ಭಾಗವಹಿಸಿದ್ದಾರೆ. ಇಲ್ಲಿ ಪ್ರತಿದಿನ ಒಂದೊಂದು ಗಿಡಗಳ, ಬೀಜಗಳ ಬಗೆಗೆ ಮಾಹಿತಿ ಜೊತೆಗೆ ಬೇಕಾದವರಿಗೆ ವಿನಿಮಯ ಮಾಡಲಾಗುತ್ತದೆ.

ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿಯ ಮುಖ್ಯಸ್ಥರಾದ ನಾಗೇಶ್ ಕಾಮತ್, ರೋಟರಿ ಆನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ಶ್ರೀಮತಿ ರಮಿತಾ ಶೈಲೇಂದ್ರ ಮತ್ತು ಶಿಕ್ಷಕರಾದ ದೀಪಕ್ ಬೀರ ಪಡುಬಿದ್ರಿ ಇವರ ಸಹಯೋಗದೊಂದಿಗೆ, ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸನ್ನ ಭಟ್ ಇವರು ಎಲ್ಲಾ ಗಿಡಗಳ ಮಾಹಿತಿಯನ್ನು ನೀಡಿ ಪ್ರೋತ್ಸಾಹ ನೀಡುವ ಮೂಲಕ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮುಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಅನಿವಾರ್ಯ ಇದೆ. ಲಾಕ್ಡೌನ್ ಅವಧಿಯಲ್ಲಿ ಸಮಯ ಇರುವುದರಿಂದ ಇಂತಹ ಚಟುವಟಿಕೆಗಳನ್ನು ಮಾಡುವ ಮೂಲಕ ನಮ್ಮ ಮನೆಯಲ್ಲೇ ತರಕಾರಿ, ಔಷಧೀಯ ಗಿಡಗಳನ್ನು ಬೆಳೆಸಬಹುದು. ಮುಂದೆ ಜನರಿಗೆ ಇಷ್ಟವಾಗುವ ಮತ್ತಷ್ಟು ಕಾರ್ಯಯೋಜನೆ ನಮ್ಮ ಮುಂದಿದೆ ಎಂದು ನಾಗೇಶ್ ಕಾಮತ್ ಕಟಪಾಡಿ ತಿಳಿಸಿದರು.