ಕಾಪು : ತೌಕ್ತೆ ಚಂಡಮಾರುತದ ತೀವ್ರತೆಯ ಪರಿಣಾಮವಾಗಿ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರವ್ಯಾಪ್ತಿಯ, ಉದ್ಯಾವರ, ಪಡುಕೆರೆ, ಮಟ್ಟು, ಕೈಪುಂಜಾಲ್ ಮತ್ತು ಕಾಪು ಬೀಚ್ ಸುತ್ತಮುತ್ತಲಿನ ಕಡಲ್ಕೊರೆತ ಉಂಟಾದ ಮತ್ತು ಹಾನಿಗಿಡಾದ ಪ್ರದೇಶಗಳಿಗೆ ಉದ್ಯಮಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.