ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಾದೆಬೆಟ್ಟು : ಕೊರೋನ ಜಾಗೃತಿ ಸಂದೇಶದೊಂದಿಗೆ 500 ಜನರಿಗೆ ತಲಾ 1ಕೆ.ಜಿಯಂತೆ ಬಾಳೆಹಣ್ಣು ವಿತರಣೆ

Posted On: 23-05-2021 10:18PM

ಪಡುಬಿದ್ರಿ : ಕೊರೊನಾ ಸಂದಿಗ್ಧ ಕಾಲದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ವಿಶ್ವ ಹಿಂದೂ ಪರಿಷತ್ ಹಾಗು ಸೇವಾ ಭಾರತಿ ಮತ್ತು ಪಾದೆಬೆಟ್ಟು ಯುವಕರಿಂದ ಪಡುಬಿದ್ರಿ-ಪಾದೆಬೆಟ್ಟು ವಲಯದಲ್ಲಿ ಸುಮಾರು 500 ಜನರಿಗೆ ತಲಾ 1ಕೆ.ಜಿ ಬಾಳೆಹಣ್ಣು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಪ್ರಶಾಂತ್ ಶೆಟ್ಟಿ ಪಾದೆಬೆಟ್ಟು, ಸುರೇಶ್ ಶೆಟ್ಟಿ ಉಳ್ಳೂರು, ಯೋಗೀಶ್ ಆಚಾರ್ಯ ಪಾದೆಬೆಟ್ಟು, ಗುರುಪ್ರಸಾದ್ ಭಟ್ ಪಾದೆಬೆಟ್ಟು ಹರೀಶ್ ಶೆಟ್ಟಿ ಪಾದೆಬೆಟ್ಟು, ಸುಕೇಶ್ ರಾವ್ ಪಾದೆಬೆಟ್ಟು, ಸುರೇಶ್ ಪೂಜಾರಿ ಪಾದೆಬೆಟ್ಟು, ಭಾಸ್ಕರ್ ಅಂಚನ್ ಪಾದೆಬೆಟ್ಟು, ಸುದರ್ಶನ್ ಶೆಟ್ಟಿ ಪಾದೆಬೆಟ್ಟು, ಸೂರಜ್ ದೇವಾಡಿಗ ಪಾದೆಬೆಟ್ಟು ಉಪಸ್ಥಿತರಿದ್ದರು.