ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ ಕಾರುಣ್ಯ ಆಶ್ರಮದಲ್ಲಿ ಬಿರುವೆರ್ ಕಾಪು ಸಂಸ್ಥೆಯ 4ನೇ ವರ್ಷದ ಸಂಭ್ರಮಾಚರಣೆ

Posted On: 26-07-2020 09:51AM

ಸದಾ ಒಂದಿಲ್ಲೊಂದು ಕೆಲಸ ಕಾರ್ಯಗಳೊಂದಿಗೆ ಕಾಪು ತಾಲೂಕಿನಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ "ಬಿರುವೆರ್ ಕಾಪು ಸೇವಾ ಟ್ರಸ್ಟ್" ತನ್ನ ನಾಲ್ಕನೇ ವರ್ಷದ ಪದಾರ್ಪಣೆಯ ಶುಭ ಸಂದರ್ಭವನ್ನು ಕಟಪಾಡಿಯ ಕಾರುಣ್ಯ ಆಶ್ರಯಧಾಮದಲ್ಲಿ ಕಳೆಯಿತು, ಆಶ್ರಮಕ್ಕೆ ನಿನ್ನೆಯ ದಿನದ ಊಟದ ವ್ಯವಸ್ಥೆ, ಒಂದು ವಾರಕ್ಕೆ ಬೇಕಾಗುವಷ್ಟು ತರಕಾರಿ, ಧವಸ ದಾನ್ಯ ಹಾಗೂ ಕೇಕ್ ಕಟಿಂಗ್ ಮತ್ತು ಸಿಹಿ ಹಂಚುವುದರ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಫ್ರೆಂಡ್ಸ್ ಕೇಟರರ್ಸ್ ನ ಮಾಲಿಕರಾದ Rtn. ನವೀನ್ ಅಮೀನ್ ಶಂಕರಪುರ, ದೀಪಕ್ ಕುಮಾರ್ ಎರ್ಮಾಳ್, ಅಶ್ವಿನಿ ಬಂಗೇರ, ರಾಕೇಶ್ ಕುಂಜೂರು, ನೀತಾ ಪ್ರಭು, ಅಶೋಕ್ ಪೂಜಾರಿ ಕಟಪಾಡಿ, ಪ್ರಮೋದ್ ಸುವರ್ಣ ಕಟಪಾಡಿ, ಪುರುಷೋತ್ತಮ್ ಸಾಲಿಯಾನ್ ಮೂಳೂರು, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಮುಖ್ಯಸ್ಥರು ಮತ್ತು ಆಶ್ರಮದ ಸಂಚಾಲಕರಾದ ಕುಮಾರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೀತಾಂಜಲಿ ಸುವರ್ಣ ಕಟಪಾಡಿ ಇವರು ಕೊರೋನ lockdown ಸಂದರ್ಭದಲ್ಲಿ "ಬಿರುವೆರ್ ಕಾಪು ಸೇವಾ ಟ್ರಸ್ಟ್" ಮಾಡಿದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು ಯಾವುದೇ ಸ್ವಾರ್ಥವಿಲ್ಲದೆ ಯುವಕರ ತಂಡ ಬಡವರ ಸೇವೆ ಮಾಡುತ್ತಿರುವುದು ಪ್ರಶಂಸಾರ್ಹ ಎಂದರು. ಕಾರ್ಯಕ್ರಮದ ಕೊನೆಗೆ ಸುಧಾಕರ್ ಸಾಲ್ಯಾನ್ ಕಾಪು ಇವರು ಧನ್ಯವಾದ ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.