ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆಯಲ್ಲಿ ಲಾಕ್ಡೌನ್ ಸದುಪಯೋಗಪಡಿಸಿಕೊಂಡ ಯುವಸೇನೆ ಮಡುಂಬು ತಂಡ

Posted On: 26-07-2020 06:55PM

ಲಾಕ್ ಡೌನ್ ಎಂದರೆ ಬಹುಷಃ ಕೆಲವರು ಮನೆಯಲ್ಲಿ ಕುಳಿತಿರಬಹುದು, ಇನ್ನೊಂದಷ್ಟು ಜನ ಅಲ್ಲಲ್ಲಿ ತಿರುಗಾಡ್ತಾ ಇರಬಹುದು.. ಆದರೇ ಇನ್ನಂಜೆ ಗ್ರಾಮದ ಮಡುಂಬುವಿನ "ಯುವಸೇನೆ ಮಡುಂಬು" ಎಂಬ ಯುವಕರ ತಂಡವೊಂದು ಲಾಕ್ ಡೌನ್ ಸಮಯವನ್ನು ವ್ಯರ್ಥ ಮಾಡದೇ ಇಪ್ಪತ್ತರಿಂದ, ಇಪ್ಪತ್ತೈದು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಡುಂಬು ಕೆ.ಪಿ ಶ್ರೀನಿವಾಸ ತಂತ್ರಿಗಳ ಮನೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಪೊದೆಗಳನ್ನು ಮತ್ತು ಮರದ ಗೆಲ್ಲುಗಳನ್ನು ಕಡಿದು, ಜನಸಂಚಾರಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಯುವಕರಿಗೆ ಮಾದರಿಯಾಗಿದ್ದಾರೆ.. ಈ ಸಂದರ್ಭದಲ್ಲಿ ಯುವಸೇನೆ ತಂಡದ ಅಧ್ಯಕ್ಷರಾದ ವರುಣ್ ಶೆಟ್ಟಿ ಮಡುಂಬು, ಮಾಜಿ ಅಧ್ಯಕ್ಷರಾದ ಸುಕೇಶ್ ಪೂಜಾರಿ ಹಾಗೂ ಗೌರವ ಸಲಹೆಗಾರರಾದ ನಿತೇಶ್ ಸಾಲ್ಯಾನ್ ಮಡುಂಬು ಉಪಸ್ಥಿತರಿದ್ದರು