ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ

Posted On: 28-07-2020 09:03AM

ಕಟಪಾಡಿ: (ಶಂಕರಪುರ) ಜೇಸಿಐ ಉಡುಪಿ ಸಿಟಿ ಘಟಕವು ಎಕ್ಸಲೆನ್ಸಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರವನ್ನು ಪಡೆದುಕೊಂಡಿತ್ತು. ಜುಲೈ.27ರಂದು ಶಂಕರಪುರ ಜೇಸಿ ಭವನದಲ್ಲಿ ನಡೆದ ವಲಯ 15 ರ ಮಧ್ಯಂತರ ಸಮ್ಮೇಳನ "ಬದಲಾವಣೆ -2020 " ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಲಯಾಧ್ಯಕ್ಷ ಕಾತಿ೯ಕೇಯ ಮಧ್ಯಸ್ಥ ರವರಿಂದ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ತನುಜಾ ಮಾಬೆನ್ ರವರು ಪಡೆದುಕೊಂಡರು. ಘಟಕವು ಅತ್ಯುತ್ತಮ ಕಾಯ೯ಕ್ರಮ, ತರಬೇತಿ ವಿಭಾಗ ಸೇರಿದಂತೆ ವಿವಿಧ ಮನ್ನಣೆಯನ್ನು ಪಡೆದುಕೊಂಡಿತ್ತು. ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಲೋಕೇಶ್ ರೈ, ಅಶೋಕ್ ಚುಂತಾರ್, ಅಶ್ವಿನಿ ಐತಾಳ, ಜಬ್ಬಾರ್ ಸಾಹೇಬ್, ಉದಯ ನಾಯ್ಕ್, ಜಗದೀಶ್ ಶೆಟ್ಟಿ, ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು,ಕವಾ೯ಲ್ ಮುಂತಾದವರಿದ್ದರು.