ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ದಾನಿಗಳ ನೆರವಿನಿಂದ ನವೀಕರಣಗೊಂಡ ಗುಂಡಿಬೈಲು ನಿವಾಸಿ ಸರೋಜರವರ ಮನೆ

Posted On: 03-08-2020 06:20PM

ಉಡುಪಿ :- ಬಾಂಧವ್ಯ ಬ್ಲಡ್ ಕನಾ೯ಟಕ ಮತ್ತು ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಇದರ ಇತಿಯಿಂದ ತುತು೯ ಸಹಾಯ ಯೋಜನೆಯ ಮೂಲಕ ನವೀಕರಣ ಗೊಂಡ ಉಡುಪಿ ಗುಂಡಿಬೈಲು ನಿವಾಸಿ ಸರೋಜ ರವರ ಬೆಳಕು ಯೋಜನೆ ಮನೆಯನ್ನು ಇಂದು ಸಂಜೆ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಅಭಿಯಾನದ ಸದಸ್ಯೆ ಜ್ಯೋತಿ ಸಾಮಾಂತ್ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿದರು. ನಂತರ ಎಲ್ಲಾ ಸದಸ್ಯರು ಮತ್ತು ಗಣ್ಯರು ಸಾಮೂಹಿಕವಾಗಿ ಹಣತೆ ಬೆಳಗಿಸಿದರು.ಈ ಸಂದಭ೯ದಲ್ಲಿ ದಿನೇಶ್ ಬಾಂಧವ್ಯ ಯೋಜನೆ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಸರೋಜರವರು ತನ್ನ ವಿಶೇಷ ಚೇತನ ಮಗಳೊಂದಿಗೆ ಸರಿಯಾದ ಸೂರಿನ ವ್ಯವಸ್ಥೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ದಾನಿಗಳ ನೆರವಿನಿಂದ ಈ ನವೀಕರಣ ಮಾಡಲಾಗಿದೆ.