ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಂಕಷ್ಟದಲ್ಲಿರುವ ಕಾರ್ಕಳದ ಇನ್ನಾ ನಿವಾಸಿ ಪ್ರವೀಣ್ ಕುಟುಂಬಕ್ಕೆ ನೆರವಾಗುವಿರಾ?

Posted On: 11-08-2020 03:48PM

ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಈ ಮಹಾಮಾರಿ ಕೊರೋನಾ ಈಗಾಗಲೇ ಸ್ಥಿತಿವಂತರ ಜಂಘಾಬಲವನ್ನೇ ಉಡುಗಿಸಿ ಜನಸಾಮಾನ್ಯರ ಪಾಡಂತೂ ದೇವರೂ ಕೇಳದಂತಹಾ ಈ ಕೆಟ್ಟ ದಿನಗಳಲ್ಲಿ ಸಣ್ಣ ಅನಾರೋಗ್ಯ ಕಾಡಿದರೂ ಕೇಳುವವರಿಲ್ಲ.ಕೊರೋನಾ ನಿಯಮಗಳ ಹೆಸರಲ್ಲಿ ,ಇನ್ನಿಲ್ಲದಷ್ಟು ಕಾಟ ನೀಡುವ ನಮ್ಮ ವ್ಯವಸ್ಥೆಯ ನಡುವೆ ದೊಡ್ಡ ಆರೋಗ್ಯ ಸಮಸ್ಯೆ ಬಂದರೆ ಹೇಗಾದೀತು ಯೋಚಿಸಿ.

ಹೌದು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಪ್ರವೀಣ್ ಕುಲಾಲ್ ಇವರು ತಾನು ಬಾರ್ ಮ್ಯಾನೇಜರ್ ವೃತ್ತಿ ನಿರ್ವಹಿಸುತ್ತಿದ್ದು ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿ ತನ್ನ ಮಡದಿ ಹಾಗೂ ಪ್ರಾಯದ ತನ್ನ ತಾಯಿಯ ಜತೆ ಬದುಕು ಸಾಗಿಸುತ್ತಿದ್ದರು.

ಇದ್ದಕಿದ್ದಂತೆ ತೀವ್ರ ತರದ ಜ್ವರ ಕಾಣಿಸಿಕೊಂಡಿದ್ದು ಕಿನ್ನಿಗೋಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಾಂಡೀಸ್ ನ ಲಕ್ಷಣಗಳು ಕಂಡಿದ್ದು ಈಗ ಮೂತ್ರಕೋಶ ಹಾಗೂ ಪಿತ್ತ ಕೋಶದ ಸಮಸ್ಯೆ ಕಾಡುತ್ತಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.

ಇದೀಗ ವಾರ ಒಂದು ಕಳೆದರೂ ಆರೋಗ್ಯದಲ್ಲಿ ಚೇತರಿಕೆ‌ ಕಾಣದೆ ತೀವೃನಿಗಾ ಘಟಕದಲ್ಲಿ ‌ಮಲಗಿದ್ದಾರೆ.ದಿನಕ್ಕೆ ₹20000 ಖರ್ಚಾಗುತ್ತಿದ್ದು ಕುಟುಂಬಕ್ಕೆ ಬೇರೆ ಆದಾಯವಿಲ್ಲದೆ ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟು ಬಿಲ್ಲು ಪಾವತಿಸುವ ಸ್ಥಿತಿ ತಲುಪಿದ್ದಾರೆ.ಇತ್ತ ICU ಒಳಗೆ ಅವರನ್ನು ಕಾಣಲೂ ಆಗದೆ ,ಅತ್ತ ದಿನದಿಂದ ದಿನಕ್ಕೆ ಹಣ ಪಾವತಿಸಿದರೂ ಪ್ರವೀಣ್ ಕುಲಾಲರು ಮಾತನಾಡಲೂ ಆಗದೆ ತನ್ನವರ ಗುರುತು ಹಿಡಿಯಲು ಅಶಕ್ತರಾಗಿದ್ದಾರೆ. ಸಂಕಷ್ಟದಲ್ಲಿರುವ ಈ‌ ಕುಟುಂಬಕ್ಕೆ ದಾನಿಗಳ‌ ಸಹಾಯದ ಅಗತ್ಯವಿದೆ.ತೀರಾ ಸಂಕಷ್ಟದಲ್ಲಿರುವ ಇವರಿಗೆ ಸಹಾಯ ಮಾಡಿ ಒಂದಿಷ್ಟು ದೈರ್ಯ ತುಂಬೋಣ. ಸಹಾಯ ಮಾಡಲಿಚ್ಛಿಸುವ ದಾನಿಗಳು‌ ಈ‌ಕೆಳಗಿನ‌ ಬ್ಯಾಂಕ್ ಖಾತೆಗೆ ಜಮ ಮಾಡಬಹುದು. Name - mohini, Branch - moodumarnadu, Account no - 520101267800222, IFSC CODE - CORP0001601