ಕಾಪುವಿನ ಭಾರತ್ ನಗರದಲ್ಲಿ ಮನೆಯೂಟಕ್ಕೆ ಹೆಸರುವಾಸಿಯಾದ ಶೆಣೈ ರೆಸ್ಟೋರೆಂಟ್ ನ ಮಾಲಕರಾದ ಭಾಸ್ಕರ್ ಶೆಣೈಯವರು ಇಂದು ಮುಂಜಾನೆ ದೈವಾಧೀನರಾದರು. ಬ್ಯಾಂಕ್ ಉದ್ಯೋಗಿಗಳು ಮತ್ತಿತರ ನೌಕರರಿಗೆ ಮನೆಯೂಟದ ಸವಿ ಬಡಿಸುತ್ತಿದ್ದ ಇವರ ಹೋಟೆಲಿಗೆ ಹಲವಾರು ಗಣ್ಯರೂ ಊಟಕ್ಕೆ ಬರುತ್ತಿದ್ದರು. ಪ್ರಸ್ತುತ ಹೋಟೆಲ್ ನ್ನು ಅವರ ಪುತ್ರ ಮೋಹನದಾಸ ಶೆಣೈಯವರು ನಡೆಸಿಕೊಂಡು ಬರುತ್ತಿದ್ದಾರೆ. ಮೃತರು ಎರಡು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.