ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಖಂಡದ ನೂತನ ಜವಾಬ್ದಾರಿಗಳ ಆಯ್ಕೆ‌

Posted On: 24-08-2020 02:01PM

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾಪು ಪ್ರಖಂಡದ ನೂತನ ಹಲವು ಜವಾಬ್ದಾರಿ ಗಳನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಘೋಷಣೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್,ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಪ್ರವೀಣ್ ಹಿರಿಯಡ್ಕ,ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ನೂತನ ಜವಾಬ್ದಾರಿಗಳನ್ನು ಘೋಷಿಸಲಾಯಿತು. ಉಪಾಧ್ಯಕ್ಷರಾಗಿ ಗೋವರ್ಧನ ಭಟ್ ಮಜೂರು ಮತ್ತು ಶರತ್ ಕಟಪಾಡಿ ಸಹ ಕಾರ್ಯದರ್ಶಿಯಾಗಿ ನಿತೇಶ್ ಸುವರ್ಣ ಎರ್ಮಾಳ್, ಕೋಶಾಧಿಕಾರಿಯಾಗಿ ಮಹೇಶ್ ಉಚ್ಚಿಲ, ಮಠಮಂದಿರ ಸಂಪರ್ಕ ಪ್ರಮುಖ್ ಸದಾಶಿವ ಕುಲಾಲ್ ಶಿರ್ವ, ಸಾಮರಸ್ಯ ಪ್ರಮುಖ್ ಭಾಸ್ಕರ ಭಂಡಾರಿ ಪಡುಬಿದ್ರಿ, ಧರ್ಮ ಪ್ರಸಾರ ಪ್ರಮುಖ್ ರಾಘವೇಂದ್ರ ಶೆಟ್ಟಿ ಪಡುಬೆಳ್ಳೆ
ಬಜರಂಗದಳ ಸಂಯೋಜಕರಾಗಿ ಸುಧೀರ್ ಕಾಪು, ಸಹ ಸಂಯೋಜಕರಾಗಿ ಶರಣ್ ಸಾಲಿಯಾನ್ ಹೆಜಮಾಡಿ, ಸೇವಾ ಪ್ರಮುಖ್ ಸುಭಾಷ್ ಶೆಟ್ಟಿ ಹೇರೂರು, ಗೋರಕ್ಷಾ ಪ್ರಮುಖ್ ನಾಗೇಶ್ ಕೋಟ್ಯಾನ್ ಪಾಂಗಾಳ, ಸುರಕ್ಷಾ ಪ್ರಮುಖ್ ಆನಂದ ಶಿರ್ವ, ಅಖಾಡ ಪ್ರಮುಖ್ ಅಭಿಜಿತ್ ಶೆಟ್ಟಿ ಪಾಂಗಾಳ ಆಯ್ಕೆಯಾದರು.