ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳ್ಮಣ್ಣು ರೋಟರಿಯಿಂದ ನಂದಳಿಕೆ ಚಂದ್ರಶೇಖರ್ ರಾವ್ ಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Posted On: 10-09-2020 01:12PM

ಬೆಳ್ಮಣ್ಣು: ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ಬೆಳ್ಮಣ್ಣು , ಶಿಕ್ಷಕರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಶಿಕ್ಷಕ ಪುರಸ್ಕೃತರಾಗಿರುವ ನಂದಳಿಕೆ ಪಡುಬೆಟ್ಟು ಶಾಲೆಯ ಮುಖ್ಯಶಿಕ್ಷಕ ರಾಗಿರುವ ನಂದಳಿಕೆ ಚಂದ್ರಶೇಖರ್ ರಾವ್ ಇವರನ್ನು ರೋಟರಿ ಸಂಸ್ಥೆ ಈ ವರ್ಷದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿರುವ ರೋ. ಸುಭಾಷ್ ಕುಮಾರ್ ನಂದಳಿಕೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ಜಿಲ್ಲಾ ಉಪ ಗವರ್ನರ್ ಆಗಿರುವ ರೋ ಸೂರ್ಯಕಾಂತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ರೋಟೇರಿಯನ್ ಸತ್ಯಪ್ರಸಾದ್ ಶೆಟ್ಟಿ, ರೋ ರಾಜೇಶ್ ಸಾಲಿಯನ್ ಉಪಸ್ಥರಿದ್ದರು, ಕಾರ್ಯದರ್ಶಿ ರೋ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು