ಉಡುಪಿಯಲ್ಲಿರುವ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು
Posted On:
21-09-2020 10:55AM
ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳ ಇತಿಹಾಸ ಇರುವ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ.
ಧರ್ಮಸ್ಥಳದ ನಂತರ ದೊಡ್ಡದಾದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರವಿದ್ದರೆ. ಅದುವೇ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ.
ಈ ದೈವಸ್ಥಾನದ ಹಿಂದಿನ ಕಾಲದ ವೈಶಿಷ್ಟತೆ ಏನೆಂದರೆ ಯಾವುದೇ ಸಂದರ್ಭದಲ್ಲಿ ಊರಿನ ಭಕ್ತರ ನ್ಯಾಯತೀರ್ಮಾನ ಈ ದೈವಸ್ಥಾನದಲ್ಲಿ ಕೊನೆಗೊಂಡರೆ ನಂತರ ಜನರು ಉಡುಪಿಯ ಕೋರ್ಟ್ ಮುಖಾಂತರ ಹೋದರು ಅಲ್ಲಿ ದೈವಸ್ಥಾನದಲ್ಲಿ ನಡೆದ ನ್ಯಾಯ ತೀರ್ಮಾನವನ್ನು ಯಾವುದೇ ವಾದ ವಿಮರ್ಶೆ ವಿಚಾರಗಳನ್ನು ಮಾಡುತ್ತಿರಲಿಲ್ಲ ಅದು ಅಲ್ಲಿಗೆ ಕೊನೆಗೊಳ್ಳುತ್ತಿತ್ತು.
ಈ ದೈವಸ್ಥಾನದಲ್ಲಿ ವಿಶೇಷ ಸೇವೆ ಎಂದರೆ ಮುದ್ರೆ ಸೇವೆ.
ಊರಿನ ಹಾಗೂ ಪರವೂರಿನ ಭಕ್ತರು ಯಾವುದೇ ಕಷ್ಟ ಸಂದರ್ಭದಲ್ಲಿ ಮಂಗಳ ಕಾರ್ಯ ಆಗದವರು ಹಾಗೂ ಉದ್ಯೋಗ ಸಮಸ್ಯೆ, ಆರೋಗ್ಯದ ಸಮಸ್ಯೆ, ವ್ಯವಹಾರದ ಸಮಸ್ಯೆ, ಸಂತಾನ ಭಾಗ್ಯದ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆ ಹೊಂದಿರುವ ಭಕ್ತರು ಅಣ್ಣಪ್ಪ ಪಂಜುರ್ಲಿಗೆ ತಮ್ಮ ಸಮಸ್ಯೆ ಎಲ್ಲಾ ನಿವಾರಣೆಯಾದರೆ ಮುದ್ರೆ ಕೊಡುವುದಾಗಿ ಹರಕೆ ಹೇಳುತ್ತಾರೆ.
ಈ ಸೇವೆ ವಾರದಲ್ಲಿ ನಾಲ್ಕು ಬಾರಿ ನಡೆಯುತ್ತದೆ.
ವಾರ್ಷಿಕವಾಗಿ ನೇಮೋತ್ಸವ, ಮಹಾ ಅನ್ನಸಂತರ್ಪಣೆ, ದೈವಸ್ಥಾನದಿಂದ ಭಂಡಾರದ ಮೆರವಣಿಗೆ ಹೊರಟು ರಾತ್ರಿ ನೇಮೋತ್ಸವ ನಡೆಯುತ್ತದೆ.
ಹಾಗೂ ವರ್ಷದಲ್ಲಿ ಭಕ್ತರ ಮೂರರಿಂದ ನಾಲ್ಕು ಹರಕೆಯ ನೇಮೋತ್ಸವ ಕೂಡ ನಡೆಯುತ್ತದೆ. ಈ ದೈವಸ್ಥಾನದಲ್ಲಿ ಪಂಬದ ವರ್ಗದವರು ಅಣ್ಣಪ್ಪ ಪಂಜುರ್ಲಿ ದೈವದ ನೇಮ ಕಟ್ಟುತ್ತಾರೆ. ಹಾಗೂ ದರ್ಶನ ಪಾತ್ರಿಯಾಗಿ ಮೊಯ್ಲಿ, ಮಡಿವಾಳ ವರ್ಗದವರು ಸೇವೆ ಸಲ್ಲಿಸುತ್ತಾರೆ.
ಈ ದೈವಸ್ಥಾನದಲ್ಲಿ ನಡೆಯುವ ದೊಂದಿ ಕೋಲ ಅತಿ ಹೆಚ್ಚು ಜನಪ್ರಿಯವಾಗಿದೆ..
ನೇಮೋತ್ಸವದ ಸಂದರ್ಭದಲ್ಲಿ ಬಹಳ ಜನಸಂಖ್ಯೆ ಸೇರುವ ಮೂಲಕ ಬಹಳ ಹಿಂದಿನ ಕಾಲದ ಪದ್ಧತಿಯಂತೆ ವಿಶಿಷ್ಟರೀತಿಯಲ್ಲಿ ಮೂಡಿ ಬರುತ್ತದೆ.
ಈ ದೈವಸ್ಥಾನದಲ್ಲಿ ದೈವದ ದರ್ಶನದ ಸಮಯದಲ್ಲಿ ದೈವ ನುಡಿಯುವ ಲೇಪಿಗೆ ತುಂಬಾ ಗೌರವಪೂರ್ಣವಾದ ಪ್ರಾಮುಖ್ಯತೆ ಇದೆ.
ಹತ್ತು ಹದಿಮೂರಕ್ಕೂ ಹೆಚ್ಚು ಗುತ್ತು ಮನೆತನ ಗ್ರಾಮದ ಮನೆತನದವರಿಗೆ ಲೆಪ್ಪು ಇದೆ..
ಈ ದೈವಸ್ಥಾನದಲ್ಲಿ ಇನ್ನೊಂದು ವಿಶೇಷವೇನೆಂದರೆ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು ಬಂಡೆ ಕಲ್ಲಿನ ಮೇಲಿದೆ.
ಹಾಗೂ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಮುಂಭಾಗದಲ್ಲಿ ಮರದ ಕೆತ್ತನೆಯಲ್ಲಿ ಪಂಜುರ್ಲಿಯ ಮುಖದ ಪೂರ್ಣ ಪರಿಚಯ ಆಗುವಂತಹ ಸನ್ನಿವೇಶ ಆಕಸ್ಮಿಕವಾಗಿ ಮರದ ಕೆತ್ತನೆಯಲ್ಲಿ ಮೂಡಿಬಂದಿದೆ.
ನಿಜಕ್ಕೂ ಈ ಸ್ಥಳದ ಮಹಿಮೆ ಅದ್ಭುತ. ದೈವಸ್ಥಾನದಲ್ಲಿ ಹಲವಾರು ವರ್ಷಗಳ ಹಿಂದೆ ಉಪಯೋಗಿಸಿದ್ದ ದೈವದ ಪರಿಕರಗಳು ಹಿಂದಿನ ಕಾಲದ ದೈವದ ಮುಖ, ಆಯುಧಗಳು, ದೀಪಗಳು ಇಲ್ಲಿ ನೋಡಲು ಸಿಗುತ್ತದೆ. ಇಲ್ಲಿಯ ಆಚಾರ-ವಿಚಾರ ಸಂಸ್ಕೃತಿಗಳು ಹಿಂದಿನ ಕಾಲದಂತೆ ಕ್ರಮಪ್ರಕಾರ ಯಾವುದೇ ಬದಲಾವಣೆ ಮಾಡದೆ ಪೂಜೆ ಪುರಸ್ಕಾರ ನೇಮೋತ್ಸವಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ನಡೆಸಿಕೊಂಡುಬರುತ್ತಿದ್ದಾರೆ.
ಇದು ನಿಜಕ್ಕೂ ಹೆಮ್ಮೆಯ ಸಂಗತಿ ಈ ದೈವಸ್ಥಾನದಲ್ಲಿ ಯುವಕ-ಯುವತಿಯರು ದೈವಸ್ಥಾನದ ಯಾವುದೇ ಒಂದು ಕಾರ್ಯಕ್ರಮದಲ್ಲಿ ಹಾಗೂ ನೇಮೋತ್ಸವ ದಲ್ಲಿ ದೈವಸ್ಥಾನಕ್ಕೆ ಸಂಬಂಧಪಟ್ಟ ಜೀರ್ಣೋದ್ದಾರ ಸಮಿತಿಯಲ್ಲಿ, ಕೆಲಸಕಾರ್ಯಗಳಲ್ಲಿ ರಾತ್ರಿ-ಹಗಲು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು.. ದೈವಸ್ಥಾನದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.
ದೈವಸ್ಥಾನದ ಮಹಿಮೆಗಳನ್ನು ಕಂಡು ಊರ ಪರವೂರಿನ ಭಕ್ತದಿಗಳು ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ಸಮಸ್ಯೆಯನ್ನು ದೈವಕ್ಕೆ ಪ್ರಾರ್ಥನೆಯೊಂದಿಗೆ ಹೇಳಿಕೊಂಡು. ನಂತರ ದೈವದ ಅನುಗ್ರಹದಿಂದ ತಮ್ಮ ಸಮಸ್ಯೆ ನಿವಾರಣೆ ಮಾಡಿಕೊಂಡು. ದೈವದ ಕೃಪೆಗೆ ಪಾತ್ರರಾಗಿದ್ದಾರೆ.
ಬರಹ ✍ ವಿನೋದ್ ಶೆಟ್ಟಿ