ರೋಟರಿ ಶಂಕರಪುರ ವಲಯ-5 ರೋಟರಿ ಜಿಲ್ಲೆ 3182
ನೂತನ ರೋಟರಿ ಸಮುದಾಯ ದಳ ಇದರ ಉದ್ಘಾಟನಾ ಮತ್ತು ಪದಪ್ರಧಾನ ಸಮಾರಂಭ ಇಂದು ಇನ್ನಂಜೆಯಲ್ಲಿ ನಡೆಯಿತು.
ಇದರ ನೂತನ ಅಧ್ಯಕ್ಷರಾಗಿ Rcc ಪ್ರಶಾಂತ್ ಶೆಟ್ಟಿ ಮಂಡೇಡಿ ಹಾಗೂ ಕಾರ್ಯದರ್ಶಿಯಾಗಿ Rcc ಮನೋಹರ್ ಕಲ್ಲುಗುಡ್ಡೆ ಹಾಗೂ ದಂಡಪಾಣಿಯಾಗಿ Rcc ಗಣೇಶ್ ಆಚಾರ್ಯ ಇನ್ನಂಜೆ ಆಯ್ಕೆಯಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ ಗವರ್ನರ್ ನವೀನ್ ಅಮೀನ್ ಶಂಕರಪುರ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ವ್ಯಕ್ತಿತ್ವ ವಿಕಸನಕ್ಕೆ ರೋಟರಿ ಕ್ಲಬ್ ಸಹಾಯ ಮಾಡುತ್ತದೆ ಎಂದರು,
ಸಭಾಪತಿ ರೋಟರಿಯನ್ ಮಾಲಿನಿ ಶೆಟ್ಟಿ ಇನ್ನಂಜೆ ರೋಟರಿ ಕ್ಲಬ್ ನ ಉದ್ದೇಶಗಳನ್ನು ತಿಳಿಸಿದರು. ಡಿಸ್ಟ್ರಿಕ್ ಗವರ್ನರ್ ನಾಗರಾಜ್ ಎಚ್ ಎನ್ ಜನಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಮತ್ತು ಅವಕಾಶಗಳನ್ನು ತೆರೆದಿಡುತ್ತದೆ, ಉದ್ಯೋಗ ಉನ್ನತಿಗಾಗಿ ರೋಟರಿಯು ಸಹಕರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರವಿವರ್ಮ ಶೆಟ್ಟಿ ಇನ್ನಂಜೆ, Rcc ಜಯರಾಮ್ ರೊಡ್ರಿಗಸ್, Rcc ವಿಕ್ಟರ್ ಮಾರ್ಟಿಸ್, Rcc ಸಂದೀಪ್ ಬಂಗೇರ ಶಂಕರಪುರ,Rcc ಹರೀಶ್ ಕುಲಾಲ್, ಕೊಪ್ಪ ಆನಂದ್ ಶೆಟ್ಟಿ, Rcc ಚಂದ್ರ ಪೂಜಾರಿ, ದಿವೇಶ್ ಶೆಟ್ಟಿ ಇನ್ನಂಜೆ, ಗ್ಲಾಡ್ಸನ್ ಕುಂದರ್ ಹಾಗೂ ಮತ್ತಿತರು ಪಾಲ್ಗೊಂಡಿದ್ದರು.
ನಂತರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ದಂಡಪಾಣಿಯವರಿಗೆ ಪದಪ್ರಧಾನ ಮಾಡಲಾಯಿತು.
ಶಂಕರಪುರ ರೋಟರಿ ಗವರ್ನರ್ ವಿಕ್ಟರ್ ಮಾರ್ಟಿಸ್ ಸ್ವಾಗತಿಸಿ, ಕಾರ್ಯದರ್ಶಿ Rcc ಮನೋಹರ್ ಕಲ್ಲುಗುಡ್ಡೆ ಇವರು ಧನ್ಯವಾದಗೈದರು.
ವರದಿ : ವಿಕ್ಕಿ ಪೂಜಾರಿ ಮಡುಂಬು