ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಿನ್ನಿಗೋಳಿ : ಸಾಹಿತ್ಯಾಸಕ್ತರಿಗೆ ಶುಭಸುದ್ದಿ ಒಕ್ಕಲುಗೊಂಡಿದೆ ಪುಸ್ತಕದ ಮನೆ

Posted On: 02-02-2021 07:47AM

ಕಿನ್ನಿಗೋಳಿ : ಪುಸ್ತಕದ ಮನೆ ಇಲ್ಲಿ ಕಾದಂಬರಿ,ಕಥಾಸಂಕಲನ , ಧಾರ್ಮಿಕ , ಯಕ್ಷಗಾನ, ಪುರಾಣ, ತುಳುಸಾಹಿತ್ಯ ಹೀಗೆ ಪುಸ್ತಕಗಳ ಸಂಗ್ರಹವಿದೆ . ಇಲ್ಲಿ ಪುಸ್ತಕ ಓದಬಹುದು , ಓದಿ ವಾಪಾಸು ತಂದು ಕೊಡಬಹುದು - ಕೊಂಡುಕೊಳ್ಳಲೂ ಬಹುದು , ಓದುಗರ ಬಳಗ ಸೇರಬಹುದು. ಪುಸ್ತಕ - ಸಾಹಿತ್ಯ ಚರ್ಚೆ ನಡೆಸಬಹುದು. ಸಾಹಿತಿಗಳನ್ನು ಭೇಟಿಮಾಡಬಹುದು. ಹೀಗೆ ಸಾಹಿತ್ಯಾಸಕ್ತರಿಗೆ ,ಓದುವ ಮನಸ್ಸುಳ್ಳ ಜ್ಞಾನದಾಹಿಗಳಿಗೆ ಏನಾದರೂ ಮಾಡಬೇಕೆಂಬ ಒತ್ತಾಸೆಯಿಂದ ಕಟ್ಟಿದ ಪುಸ್ತಕದ ಮನೆ ಜ.28 ರಂದು ಕಿನ್ನಿಗೋಳಿಯಲ್ಲಿ ತೆರೆಯಿತು .

ಕಟೀಲಿನ ಪಾಂಡುರಂಗ ಭಟ್ಟ ಮತ್ತು ಕೆ.ಎಲ್.ಕುಂಡಂತಾಯ ಅವರು 'ಪುಸ್ತಕದ ಮನೆ'ಯನ್ನು ಉದ್ಘಾಟಿಸಿದರು .ಬಾಲಕೃಷ್ಣ ಉಡುಪ ,ದೇವದಾಸ ಮಲ್ಯ , ಪುರುಷೋತ್ತಮ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ಕಿನ್ನಿಗೋಳಿಯ ಅನಂತ ಪ್ರಕಾಶದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ 'ಪುಸ್ತಕದ ಮನೆ' ತೆರೆಯಲಾಗಿದೆ ಎಂದು ಸಚ್ಚಿದಾನಂದ ಉಡುಪ ಹೇಳಿದರು .ಗಾಯತ್ರೀ ಉಡುಪ ಸ್ವಾಗತಿಸಿ ,ವಂದಿಸಿದರು .ಮಿಥುನ್ ಉಡುಪ , ರಸನಾ ಉಡುಪ ಉಪಸ್ಥಿತರಿದ್ದರು .ಸಾಹಿತ್ತಾಸಕ್ತರು ಶುಭಹಾರೈಸಿದರು. "ಪುಸ್ತಕದ ಮನೆ" ಅಪೂರ್ವ ಕಲ್ಪನೆಯ ಮೂರ್ತ ಸ್ವರೂಪವಾಗಿ ಲೋಕಾರ್ಪಣೆ ಯಾಗಿದೆ.