ಕಾಪು : ಧರೆಗುರುಳಿದ ಬೃಹತ್ ಗಾತ್ರದ ಮರ, ಅರಣ್ಯ ಇಲಾಖೆ, ಪೋಲೀಸ್, ಸ್ಥಳೀಯರಿಂದ ತೆರವು
Thumbnail
ಕಾಪು, ಜೂ.15 : ಇಂದು ಬೆಳಿಗ್ಗೆ ಕಾಪು, ಮಜೂರು ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ಸ್ಥಳೀಯರಿಗೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬೆಳಿಗ್ಗೆ ಸರಿ ಸುಮಾರು 4:30 ಕ್ಕೆ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಹಿಂಭಾಗದಲ್ಲಿ ಈ ಮರವು ಧರೆಗೆ ಉರುಳಿದ್ದು ಸ್ಥಳೀಯರು ಕಾಪು ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಕಾಪು ಠಾಣಾ ಸಿಬ್ಬಂದಿ ಹರೀಶ್ ನಾಯ್ಕ್ ರವರ ಸಹಕಾರದಿಂದ ಈ ಮರವನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಉಮೇಶ್ ಶೆಟ್ಟಿ, ಪ್ರಕಾಶ್ ದೇವಾಡಿಗ ಮತ್ತು ಪ್ರಶಾಂತ್ ಪೂಜಾರಿ ಕಾಪು ಹಾಗೂ ಮತ್ತಿತರರು ಉಪಸ್ಥಿತರಿದ್ದು ಬೃಹತ್ ಗಾತ್ರದ ಮರವನ್ನು ತೆರವು ಗೊಳಿಸಲು ಸಹಕರಿಸಿದರು.
Additional image Additional image
15 Jun 2021, 08:27 AM
Category: Kaup
Tags: