ಪಡುಬಿದ್ರಿ : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ವತಿಯಿಂದ ದೈನಂದಿನ ಆಹಾರ ಸಾಮಗ್ರಿ ವಿತರಣೆ
ಸೌರಮಾನ ಯುಗಾದಿಯ ಪ್ರಯುಕ್ತ ಲಾಕ್ಡೌನ್ ಹಿನ್ನೆಲೆಯಲ್ಲಿ ಅವರಾಲು ಮಟ್ಟು ಗ್ರಾಮದ 30 ಮನೆಗಳಿಗೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ ಸದಸ್ಯರು ಹಾಗು ದಾನಿಗಳಾದ ಗೌತಮ್ ಶೆಟ್ಟಿ ಅವರಾಲು, ಪ್ರಶಾಂತ್ ಶೆಟ್ಟಿ ಅವರಾಲು, ಗಾಯತ್ರಿ ಪ್ರಭು ಪಲಿಮಾರ್, ಪ್ರಕಾಶ್ ನಡಿಯಾರ್, ದಯಾನಂದ ಬಾಳೆಹಿತ್ಲು, ಗಣೇಶ್ ಗುಜರನ್ ಪಡುಬಿದ್ರಿ ಸಹಕಾರದಿಂದ ಕುಚ್ಚಲು ಅಕ್ಕಿ ಮತ್ತು ದೈನಂದಿನ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
