ಕರಾವಳಿ ಫ್ರೆಂಡ್ಸ್ ಹರೀಶ್ ಪೂಜಾರಿ ಸ್ಮರಣಾರ್ಥ ದಿನ ಬಳಕೆ ಸಾಮಗ್ರಿ ಹಸ್ತಾಂತರ
Thumbnail
ಕಟಪಾಡಿ,ಎ.12: ಸರಕಾರಿಗುಡ್ಡೆ ಕರಾವಳಿ ಫ್ರೆಂಡ್ಸ್ ತಂಡವು ಕಳೆದ 7 ತಿಂಗಳ ಹಿಂದೆ ಅಗಲಿದ ತಂಡದ ಸದಸ್ಯ ಹರೀಶ್ ಪೂಜಾರಿ ಸ್ಮರಣಾರ್ಥ ಲಾಕ್‍ಡೌನ್ ಸಂದರ್ಭದಲ್ಲಿ ಅಶಕ್ತರಿಗೆ ವಿತರಿಸಲು ಅಕ್ಕಿ, ಬೇಳೆ, ಜಿನಸು ಸಾಮಾಗ್ರಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ.ಸುವರ್ಣ ಮೂಲಕ ಬಿರುವೆರ್ ಕಾಪು ಸೇವಾ ಟ್ರಸ್ಟ್ಗೆ ಹಸ್ತಾಂತರಿಸಿದರು. ಈ ಸಂದರ್ಭ ಕರಾವಳಿ ಫ್ರೆಂಡ್ಸ್, ಸಂತೋಷ್ ಪೂಜಾರಿ, ಪ್ರವೀಣ್, ನವೀನ್, ರಾಜಾ, ಬಿರುವೆರ್ ಕಾಪು ಸೇವಾ ಟ್ರಸ್ಟ್ನ ಮನೋಹರ್ ಕಲ್ಲುಗುಡ್ಡೆ , ವಿಕೇಶ್ ಪೂಜಾರಿ ಮಡುಂಬು ಮೊದಲಾದವರು ಉಪಸ್ಥಿತರಿದ್ದರು..
14 Apr 2020, 08:33 PM
Category: Kaup
Tags: