ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದ ವತಿಯಿಂದ ಗೋ ಶಾಲೆಗೆ ಪಶು ಆಹಾರ ಸಲ್ಲಿಕೆ
Thumbnail
ಕಾಪು : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ) ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀ ಆನೆಗೊಂದಿ ಸಂಸ್ಥಾನದ ಗುರುಪೀಠದ ಗೋ ಶಾಲೆಗೆ ಪಶು ಆಹಾರ(ಹುಲ್ಲು)ವನ್ನು ಶ್ರಮದಾನದ ಮೂಲಕ ಸಂಗ್ರಹ ಮಾಡಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಉಮೇಶ್ ಆಚಾರ್ಯ, ಗೌರವ ಅಧ್ಯಕ್ಷ ಸುರೇಶ್ ಆಚಾರ್ಯ, ಕಾರ್ಯದರ್ಶಿ ಮಾಧವ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ ಮತ್ತು ಸದಸ್ಯರು ಉಪಸ್ಥಿತರಿದ್ದರು. ಈ‌ ಸಂದರ್ಭ ಸ್ವಾಮೀಜಿಯವರು ಫಲ ಮಂತ್ರಾಕ್ಷತೆ ನೀಡಿ ಹರಸಿದರು.
04 Oct 2021, 02:24 PM
Category: Kaup
Tags: