ಹೋಟೆಲ್ ಕಾರ್ಮಿಕರ ಸಂಕಷ್ಟಕ್ಕೆ ಸರಕಾರ ಇದುವರೆಗೂ ಸ್ಪಂದಿಸಿಲ್ಲ
Thumbnail
ಕೊರೋನಾ ಲಾಕ್ ಡೌನ್ ನಡುವೆ ದೊಡ್ಡ ಉದ್ದಿಮೆ ಹಾಗೂ ಸಣ್ಣ ಉದ್ದಿಮೆದಾರರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಹೋಟೆಲ್ ಉದ್ಯಮಿಗಳು ಕೂಡ ಇದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ನಮ್ಮ ಕೈ ಹಿಡಿಯದೇ ಇರುವುದರಿಂದಾಗಿ ಇಂದು ಕಾರ್ಮಿಕರ ರಕ್ಷಣೆಗಾಗಿ ಹೊಸ ನೀತಿಯನ್ನು ಜಾರಿಗೆ ತರಬೇಕಾಗಿದೆ ಎಂದು ಹೋಟೆಲ್ ಉದ್ಯಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಿನ ಸಮೀಪದ ಬನ್ನೇರುಘಟ್ಟ ಬಳಿಯ ಜಂಬುಸವಾರಿ ದಿಣ್ಣೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್ ಉದ್ದಿಮೆದಾರರಾದ ಚಂದ್ರಶೇಖರ್ ಹಾಗೂ ಶಾಂತರಾಮ್ ಶೆಟ್ಟಿ ಸೇರಿಂದತೆ ಹಲವು ಹೋಟೆಲ್ ಗಳ ಮಾಲೀಕರು ಮಾತನಾಡಿದರು. ಹೋಟೆಲ್ ಉದ್ಯಮಿದಾರರು ಕೊರೋನಾ ಮಹಾಮಾರಿಯಿಂದ ಸಂಕಷ್ಟಕೀಡಾಗಿದ್ದಾರೆ. ಈ ಸಂಧರ್ಭದಲ್ಲಿ ಸರಕಾರ ಸಹಾಯಕ್ಕೆ ಬರಲಿಲ್ಲ ಎನ್ನುವ ನೋವು ಹೋಟೆಲ್ ಉದ್ಯಮಿಗಳಿಗಿದೆ. ಆದರೆ ಮುಂದಿನ ದಿನಗಳಲ್ಲಿ ನಮ್ಮ ಜವಾಬ್ದಾರಿ ನಮ್ಮದೇ ಎನ್ನುವುದನ್ನು ಈಗಾಗಲೇ ಹೋಟೆಲ್ ಉದ್ಯಮಿಗಳಿಗೆ ಅರಿವಾಗಿದೆ. ಹೋಟೆಲ್ ಉದ್ಯಮಕ್ಕೆ ಸಂಘಗಳು ಸಹಾಯಕ್ಕೆ ಬರದಿರುವುದು ಬಹಳ ನೋವಿನ ಸಂಗತಿಯಾಗಿದ್ದು, ಮೂವತ್ತು ಮೊವತೈದು ವರ್ಷಗಳಿಂದ ಉದ್ಯಮವನ್ನೇ ಅವಲಂಬಿಸಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ ಎಂದು ಹೋಟೆಲ್ ಉದ್ಯಮಿ ಚಂದ್ರಶೇಖರ್ ಹಾಗೂ ಶಾಂತರಾಮ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
18 May 2020, 06:21 PM
Category: Kaup
Tags: