ಪಲಿಮಾರು : ನರೇಂದ್ರ ಮೋದಿಯವರ ಎಂಟನೇ ವರ್ಷದ ಆಡಳಿತದ ಪ್ರಯುಕ್ತ ಎಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
Thumbnail
ಕಾಪು : ಬಿಜೆಪಿ ಶಕ್ತಿಕೇಂದ್ರ ಪಲಿಮಾರು ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಎಂಟನೇ ವರ್ಷದ ಆಡಳಿತದ ಪ್ರಯುಕ್ತ ಸೇವಾ ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವು ಅವರಾಲು ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಲಿಮಾರು ಶಕ್ತಿಕೇಂದ್ರ ಅಧ್ಯಕ್ಷರಾದ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು, ವಾರ್ಡ್ ಅಧ್ಯಕ್ಷರಾದ ಪ್ರಜ್ವಲ್ ನಂದಿಕೂರು, ಶಕ್ತಿಕೇಂದ್ರ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಸುಮಂಗಲ ದೇವಾಡಿಗ, ಸುಜಾತ, ರಶ್ಮಿ, ಪ್ರಿಯ, ರಾಜೇಶ್ ಪೈ, ಮಹೇಶ್, ಪ್ರವೀಣ್ ಹಿಂದುಳಿದ ವರ್ಗಗಳ ಮೋರ್ಚಾದ ಸದಸ್ಯರಾದ ಪ್ರಸಾದ್ ಪಲಿಮಾರು, ಹರೀಶ್, ಪ್ರತಾಪ್, ಅರುಣ್ ಶೆಟ್ಟಿ, ಪ್ರೀತಮ್ ಶೆಟ್ಟಿ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Additional image
20 Jun 2022, 07:47 PM
Category: Kaup
Tags: