ಅದಮಾರಿನ ಆದರ್ಶ ಯುವಕ ಸಂಘದ ಗೌರವ ಸ್ವೀಕಾರಕ್ಕಾಗಿ ಯೋಧ ಬಾಲಕೃಷ್ಣ ಟಿ. ಭಂಡಾರಿಗೆ ಆಮಂತ್ರಣ
ಅದಮಾರು : ದೇಶದ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ ಭೂಸೇನೆಯಲ್ಲಿ ಸೇವೆಗೈದ ಕಾಪು ತಾಲೂಕಿನ ಅದಮಾರಿನ ಹೆಮ್ಮೆಯ ಯೋಧ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯ ಸಂದರ್ಭದಲ್ಲಿ ಶುಭಹಾರೈಸಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಗೌರವಿಸಲು ಅದಮಾರಿನ ಆದರ್ಶ ಯುವಕ ಸಂಘದ ವತಿಯಿಂದ ಜುಲೈ 26ರಂದು ಆಮಂತ್ರಿಸಲಾಯಿತು.
