ಕಟಪಾಡಿ : ಏಣಗುಡ್ಡೆ ಗರಡಿಯಲ್ಲಿ ಸೋಣ ಸಂಕ್ರಮಣ ಪೂಜೆ
ಕಟಪಾಡಿ : ತುಳುನಾಡಿನ ಅತ್ಯಂತ ಕಾರಣಿಕದ ಗರಡಿಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಹೆಸರಾಂತ ಬ್ರಹ್ಮ ಬೈದೇರುಗಳ ಗರಡಿಯಾದ ಏಣಗುಡ್ಡೆ ಗರಡಿಯಲ್ಲಿ ಇಂದು ಸೋಣ ಸಂಕ್ರಮಣ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು.
ಗರಡಿಯ ಪೂ ಪೂಜಾರಿಯಾದ ಇಂಪು ಪೂಜಾರಿ ಯವರ ನೇತೃತ್ವ ದಲ್ಲಿ ನಡೆದ ಪೂಜೆಯು ಊರಿನ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆಯಿತು.
ಸೋಣ ಸಂಕ್ರಮಣದ ಪ್ರಯುಕ್ತ ಗರಡಿ ಜವನೇರ್ ಸದಸ್ಯರ ವತಿಯಿಂದ ಬಂದಂತಹ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಗರಡಿಮನೆ ಅಶೋಕ್. ಎನ್. ಪೂಜಾರಿ, ಗರಡಿ ಜವನೇರ್ ತಂಡದ ಪ್ರಮುಖರಾದ ಸುಧೀರ್ ಪೂಜಾರಿ, ಆರು ಮಾಗಣೆಯ ಗುರಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
