ನಂದಿಕೂರಿನ ಮಹಿಳೆಗೆ ವೀಲ್ ಚೇರ್ ಹಸ್ತಾಂತರ
ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಪಲಿಮಾರು ಇದರ ನೇತೃತ್ವದಲ್ಲಿ ನಂದಿಕೂರಿನ ಕಲ್ಯಾಣಿ ಪೂಜಾರ್ತಿಯವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.
ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇವರ ಮನವಿ ಮೇರೆಗೆ ಬೆಂಗಳೂರಿನ ಉದ್ಯಮಿ ಗಣೇಶ್ ಗುಜರನ್ ಪಡುಬಿದ್ರಿ ಕೂಡಲೇ ಸ್ಪಂದಿಸಿ ವೀಲ್ ಚೇರ್ ಕೊಡುಗೆ ನೀಡಿದ್ದರು.
ಈ ಸಂದರ್ಭ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಅಧ್ಯಕ್ಷರಾದ ಹರೀಶ್ ಪೂಜಾರಿ, ಸದಸ್ಯರಾದ ಪ್ರಕಾಶ್ ಪೂಜಾರಿ, ಉದ್ಯಮಿ ಗಣೇಶ್ ಗುಜರನ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.
